ಜೂ. 19ರಂದು ಮಂಜನಾಡಿಯಲ್ಲಿ ರಕ್ತದಾನ ಶಿಬಿರ
ಮಂಗಳೂರು : ಯುವ ಕಾಂಗ್ರೆಸ್ ಘಟಕ ಮಂಜನಾಡಿ ಮತ್ತು ಮಂಜನಾಡಿ ಗ್ರಾಮ ಕಾಂಗ್ರೆಸ್ ಸಮಿತಿ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು ಜೊತೆಯಾಗಿ ಯೆನೆಪೋಯ ಆಸ್ಪತ್ರೆ ದೇರಳಕಟ್ಟೆ ಸಹಯೋಗದೊಂದಿಗೆ ರಕ್ತದಾನ ಶಿಬಿರವನ್ನು ಮಅದನುಲ್ ಉಲೂಂ ಮದರಸ ಮಂಗಳಾಂತಿ, ಮಂಜನಾಡಿಯಲ್ಲಿ ಜೂ.19ರಂದು ಆಯೋಜಿಸಲಾಗಿದೆ.
ರಕ್ತದಾನ ಅಂದು ಬೆಳಗ್ಗೆ 8.00 ರಿಂದ 1.00 ರವರೆಗೆ ನಡೆಯಲಿದೆ. ಈ ರಕ್ತದಾನ ಶಿಬಿರವು ಕೋವಿಡ್-19 ಸರಕಾರದ ಮಾರ್ಗಸೂಚಿಯಂತೆ ನಡೆಯಲಿದ್ದು, ಶಿಬಿರಕ್ಕೆ ಬರುವವರು ಕಡ್ಡಾಯವಾಗಿ ಮಾಸ್ಕ್ ಧರಿಸಿ, ಅಂತರ ಕಾಪಾಡಬೇಕು ಎಂದು ಮಂಜನಾಡಿ ಯುವ ಕಾಂಗ್ರೆಸ್ ಘಟಕ ಅಧ್ಯಕ್ಷ ಅಶೀರುದ್ದೀನ್ ಸಾರ್ತಬೈಲ್ ತಿಳಿಸಿದ್ದಾರೆ.
Next Story