ಕಾರ್ಕಳ: ಜೂ. 21ರಂದು ಕೋವಿಡ್ ವ್ಯಾಕ್ಸಿನ್ ಮೇಳ: ಡಾ. ಕೃಷ್ಣಾನಂದ ಶೆಟ್ಟಿ
ಕಾರ್ಕಳ : ತಾಲೂಕಿನಾದ್ಯಂತ ಜೂ. 21ರಂದು ಕೋವಿಡ್ ವ್ಯಾಕ್ಸಿನ್ ಮೇಳ ನಡೆಯಲಿದೆ ಎಂದು ಕಾರ್ಕಳ ತಾಲೂಕು ಆರೋಗ್ಯಾಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ತಿಳಿಸಿದ್ದಾರೆ.
ಕಾರ್ಕಳದಲ್ಲಿ ಭಗವಾನ್ ಶ್ರೀ ಬಾಹುಬಲಿ ಪ್ರವಚನ ಮಂದಿರ ದಲ್ಲಿ ಹಾಗೂ ಎಲ್ಲಾ ಆರೋಗ್ಯ ಕೇಂದ್ರಗಳಲ್ಲಿ ಬೆಳಗ್ಗೆ 9 ಗಂಟೆಯಿಂದ ಸಾಯಂಕಾಲ 4 ಗಂಟೆಯವರೆಗೆ ಕೋವಿಡ್ ಲಸಿಕಾ ಮೇಳ ನಡೆಯಲಿದೆ.
ತಾಲೂಕಿನಾದ್ಯಂತ 4000 ಜನರಿಗೆ ಲಸಿಕೆ ನೀಡುವ ಅಭಿಯಾನ ನಡೆಯಲಿದೆ. ನಗರ ಪ್ರದೇಶದ ಜನರಿಗೆ ಕಾರ್ಕಳ ಬಹುಬಲಿ ಪ್ರವಚನ ಮಂದಿರದಲ್ಲಿ 600 ಜನರಿಗೆ ಲಸಿಕೆ ದೊರೆಯಲಿದೆ. 45 ವರ್ಷ ಮೇಲ್ಪಟ್ಟ ಸಾರ್ವಜನಿಕರಿಗೆ ಮೊದಲ ಡೋಸ್ ಲಸಿಕೆ ನೀಡಲಾಗುವುದು. ಕೋವೀಶಿಲ್ಡ್ ಲಸಿಕೆ ಮೊದಲನ ಡೋಸ್ ಪಡೆದು 84 ದಿನ ಆದನಂತರ ಕೋವಿ ಶೀಲ್ಡ್ ಎರಡನೇ ಡೋಸ್ ಹಾಗೂ ಕೊವ್ಯಾಕ್ಸಿನ್ ಮೊದಲ ಡೋಸ್ ಪಡೆದ ನಾಲ್ಕರಿಂದ ಆರು ವಾರ ಆದವರಿಗೆ 2ನೇ ಡೋಸ್ ಲಸಿಕೆ ನೀಡಲಾಗುವುದು. ಹದಿನೆಂಟರಿಂದ 44 ವರ್ಷದ ಸರಕಾರ ಗುರುತಿಸಿದ ಮುಂಚೂಣಿ ಕಾರ್ಯಕರ್ತರಿಗೆ ಹಾಗೂ ಆದ್ಯತೆ ಗುಂಪಿನವರಿಗೆ ಮೊದಲ ಡೋಸ್ ನೀಡಲಾಗುವುದು. ಒಂದೇ ದಿನ ತಾಲೂಕಿನಾದ್ಯಂತ ವ್ಯಾಕ್ಸಿಂಗ್ ಲಭ್ಯತೆ ಇರುವುದರಿಂದ ಹೆಚ್ಚಿನ ಸಾರ್ವಜನಿಕರು ಕೋವಿಡ್ ಲಸಿಕೆ ಪಡೆದುಕೊಂಡು ಲಸಿಕಾ ಮೇಳವನ್ನು ಯಶಸ್ವಿಗೊಳಿಸಬೇಕಾಗಿ ತಾಲೂಕು ಆರೋಗ್ಯಧಿಕಾರಿ ಡಾ. ಕೃಷ್ಣಾನಂದ ಶೆಟ್ಟಿ ಸಾರ್ವಜನಿಕರಲ್ಲಿ ವಿನಂತಿಸಿದ್ದಾರೆ.