ಮಾಸ್ಕ್ ಹಾಕುವಂತೆ ಹೇಳಿದಕ್ಕೆ ಹಲ್ಲೆ: ದೂರು
ಮಲ್ಪೆ, ಜು.3: ಮಾಸ್ಕ್ ಹಾಕುವಂತೆ ಬುದ್ದಿವಾದ ಹೇಳಿದಕ್ಕೆ ಯುವಕರ ತಂಡ ಹಲ್ಲೆ ನಡೆಸಿ ಬೆದರಿಕೆಯೊಡ್ಡಿರುವ ಬಗ್ಗೆ ಮಲ್ಪೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಜು.2ರಂದು ಗುಲ್ಸಾನ್ ಬಾನು ಎಂಬವರ ತಾಯಿ, ಮಾಸ್ಕ್ ಹಾಕದೆ ತಿರುಗಾಡುತ್ತಿದ್ದ ನೆರೆಮನೆಯ ಜೊಯಿಸನ್ ಡಿಸೋಜ, ಪ್ರಮೋದ್, ಪ್ರತಾಪ್ ಎಂಬವರಿಗೆ ಬುದ್ದಿವಾದ ಹೇಳಿದ್ದರು. ಅದಕ್ಕೆ ಕೋಪಕೊಂಡ ಆರೋಪಿಗಳು, ಗುಲ್ಸಾನ್ ಬಾನುರ ತಂದೆಯ ಮೊಬೈಲ್ ಗೆ ರಾತ್ರಿ ಕರೆ ಮಾಡಿ ಅವಾಚ್ಯ ಶಬ್ದಗಳಿಂದ ಬೈದು, ನಂತರ ಕಾರಿನಲ್ಲಿ ಮನೆಗೆ ಬಂದು, ಬಾನು ಅವರ ತಮ್ಮನಿಗೆ ಹೊಡೆದು ಬೈದು ಕೊಲ್ಲುದಾಗಿ ಜೀವ ಬೆದರಿಕೆ ಹಾಕಿರುವುದಾಗಿ ದೂರಲಾಗಿದೆ.
Next Story