ಸಾಣೂರು: ಮಳೆಯಿಂದ ಮನೆ ಸಂಪೂರ್ಣ ಹಾನಿ
ಉಡುಪಿ, ಜು.23: ಕಳೆದ ಕೆಲವು ದಿನಗಳ ಸತತ ಮಳೆಯಿಂದ ಕಾರ್ಕಳ ತಾಲೂಕಿನ ಸಾಣೂರು ಗ್ರಾಮದ ರಾಮ ಪೂಜಾರಿ ಎಂಬವರ ಮನೆ ಗುರುವಾರ ಕುಸಿದಿದ್ದು ಸಂಪೂರ್ಣ ಹಾನಿಗೊಂಡಿದೆ. ಇದರಿಂದ ಎರಡು ಲಕ್ಷ ರೂ.ಗಳಿಗೂ ಅಧಿಕ ನಷ್ಟ ಸಂಭವಿ ಸಿದೆ ಎಂದು ವರದಿಯಾಗಿದೆ.
ಬೈಂದೂರು ತಾಲೂಕು ನಾವುಂದ ಗ್ರಾಮದ ಶಂಕರ ಆಚಾರಿ ಇವರ ಮನೆಗೆ ಭಾಗಶ: ಹಾನಿಯಾಗಿ 50,000ರೂ. ಹಾಗೂ ಬಿಜೂರು ಗ್ರಾಮದ ಮಹಾಬಲ ಆಚಾರಿ ಇವರ ಮನೆ ಹಾಗೂ ಜಾನುವಾರು ಕೊಟ್ಟಿಗೆಗೆ ಗಾಳಿಮಳೆಯಿಂದ ಭಾಗಶ: ಹಾನಿಯಾಗಿ 50,000ರೂ.ನಷ್ಟ ಸಂಭವಿಸಿದೆ.
ಕುಂದಾಪುರ ತಾಲೂಕು ಉಪ್ಪಿನಕುದ್ರು ಗ್ರಾಮದ ನಾಗರತ್ನ ಎಂಬವರ ಮನೆಗೆ 95,000ರೂ. ಹಾಗೂ ರಾಧಾ ಎಂಬವರ ಮನೆಗೆ 30,000ರೂ.ನಷ್ಟದ ಅಂದಾಜು ಮಾಡಲಾಗಿದೆ. ಅದೇ ರೀತಿ ತಾಲೂಕಿನ ಅಂಪಾರು ಗ್ರಾಮದ ಕೊರ್ಗು ಎಂಬವರ ತೋಟಗಾರಿಕಾ ಬೆಳೆಗಳಿಗೂ ಅಪಾರ ಹಾನಿ ಸಂಭವಿಸಿದೆ ಎಂದು ವರದಿಗಳು ತಿಳಿಸಿವೆ.
Next Story