ಅಂದರ್ ಬಾಹರ್ ಆರೋಪ : ಮೂವರ ಬಂಧನ
ಕುಂದಾಪುರ, ಜು. 28: ತಲ್ಲೂರು ಗ್ರಾಮದ ಮಾರನಮನೆ ಎಂಬಲ್ಲಿ ಜು.24 ರಂದು ಅಂದರ್ ಬಾಹರ್ ಇಸ್ಪೀಟು ಜುಗಾರಿ ಆಡುತ್ತಿದ್ದ ಮೂವರನ್ನು ಕುಂದಾಪುರ ಪೊಲೀಸರು ಬಂಧಿಸಿದ್ದಾರೆ.
ನಾರಾಯಣ ದೇವಾಡಿಗ (40), ರಮೇಶ ದೇವಾಡಿಗ (36), ಭಾಸ್ಕರ ದೇವಾಡಿಗ (53) ಬಂಧಿತ ಆರೋಪಿಗಳು. ಇವರಿಂದ 1250 ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story