ಉಳ್ಳಾಲ: 'ಇಜ್ತಿನಾಬ್-90' ಕಾರ್ಯಕ್ರಮ
ಉಳ್ಳಾಲ, ಆ.1: ಕರ್ನಾಟಕ ರಾಜ್ಯ ಸುನ್ನೀ ಯುವಜನ ಸಂಘ ಎಸ್ ವೈ ಎಸ್ ಕಿನ್ಯಾ ಸೆಂಟರ್ ಇದರ ವತಿಯಿಂದ 'ಇಜ್ತಿನಾಬ್-90' ಕಾರ್ಯ ಕ್ರಮವು ಇಂದು ಸಂಜೆ ಕಿನ್ಯಾ ಬಖಾರಿ ಜುಮಾ ಮಸ್ಜಿದ್ ನಲ್ಲಿ ಸೆಂಟರ್ ಅಧ್ಯಕ್ಷರಾದ ಇಸ್ಮಾಯಿಲ್ ಹಾಜಿ ಪರಮಾಂಡ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಮುಹಮ್ಮದ್ ಅಲಿ ಸಖಾಫಿ ಸುರಿಬೈಲ್ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಎಸ್ಪಿ ಹಂಝ ಸಖಾಫಿ ಬಂಟ್ವಾಳ, ಟಿ ಎಂ ಮುಹ್ಯಿದ್ದೀನ್ ಕಾಮಿಲ್ ಸಖಾಫಿ ತೋಕೆ ಮಾತನಾಡಿದರು.
ಸಮಾರಂಭದಲ್ಲಿ ಸ್ಥಳೀಯ ಖತೀಬರಾದ ಉಸ್ಮಾನ್ ಸಖಾಫಿ, ಇಸ್ಮಾಯಿಲ್ ಸಅದಿ ಕಿನ್ಯಾ, ಅಬ್ಬಾಸ್ ಹಾಜಿ ನಾಟೆಕಲ್, ಇಬ್ರಾಹಿಮ್ ಖಲೀಲ್ ಮುಸ್ಲಿಯಾರ್ ಕಾವೂರು,ಇರ್ಫಾನ್ ನೂರಾನಿ, ಉಕ್ಕುಡ ಕಿನ್ಯಾ, ಕೆ. ಎಂ. ಇಬ್ರಾಹಿಂ ಹಾಜಿ ಕುತುಬಿ ನಗರ, ಇ. ಕೆ.ಇಬ್ರಾಹಿಮ್ , ಕಿನ್ಯಾ ಕೇಂದ್ರ ಜುಮಾ ಮಸೀದಿ ಕೋಶಾಧಿಕಾರಿ ಸಾದುಕುಂಞ್ಞಿ ಹಾಜಿ ಸಾಗ್ ಬಾಗ್,ಉಸ್ಮಾನ್ ಝುಹುರಿ ಕುರಿಯ, ರಫೀಖ್ ಝುಹುರಿ ಕುರಿಯ, ಮಸೂದ್ ಕಿನ್ಯಾ, ಕೆ.ಎಂ.ಇಸ್ಮಾಯಿಲ್ ಸಾಗ್, ವಿಎ ಮುಹಮ್ಮದ್ ಮುಸ್ಲಿಯಾರ್ ಮುಂತಾದವರು ಭಾಗವಹಿಸಿದ್ದರು.
ಮೆಹಬೂಬ್ ಸಖಾಫಿ ಕಿನ್ಯಾ ಕಾರ್ಯಕ್ರಮ ನಿರೂಪಿಸಿದರು.