ಇರ್ವತ್ತೂರು: ಪಿಡಿಒಗೆ ಬೀಳ್ಕೊಡುಗೆ
ಇರ್ವತ್ತೂರು: ಬಂಟ್ವಾಳ ತಾಲೂಕಿನ ಇರ್ವತ್ತೂರು ಗ್ರಾಮ ಪಂಚಾಯತ್ ನಲ್ಲಿ ಕಳೆದ ಕೆಲವು ವರ್ಷಗಳಿಂದ ಪಂಚಾಯತ್ ಅಭಿವೃದ್ಧಿ ಅಧಿಕಾರಿಯಾಗಿ ಕಾರ್ಯನಿರ್ವಹಿಸುತ್ತಿದ್ದ ಅವಿನಾಶ್ ಬಿ.ಆರ್ ರವರು ಸರ್ಕಾರದ ಆದೇಶದ ಪ್ರಕಾರ ವರ್ಗಾವಣೆಯಾಗುತ್ತಿರುವುದರಿಂದ, ಅವರಿಗೆ ಇರ್ವತ್ತೂರು ಗ್ರಾಮ ಪಂಚಾಯತ್ ಮತ್ತು ಗ್ರಾಮಸ್ಥರು ಆಯೋಜಿಸಿದ್ದ ಬೀಳ್ಕೊಡುಗೆ ಸಮಾರಂಭದಲ್ಲಿ ಎಸ್ ಡಿಪಿಐ ಇರ್ವತ್ತೂರು ವತಿಯಿಂದ ಸನ್ಮಾನಿಸಿ, ನೆನಪಿನ ಕಾಣಿಕೆ ನೀಡಲಾಯಿತು.
ಈ ಸಂದರ್ಭ ಕತರ್ ಅನಿವಾಸಿ ಭಾರತೀಯ ಉದ್ಯಮಿ ಝಹೀರ್, ಎಸ್ ಡಿಪಿಐ ಇರ್ವತ್ತೂರು ಇದರ ಅಧ್ಯಕ್ಷರಾದ ಫೈರೋಝ್ ಮೂರ್ಜೆ, ರಶೀದ್ ಮೂರ್ಜೆ, ಅಝರ್ ಪಂಜೋಡಿ ಮತ್ತು ಸಾದಾತ್ ಬಾಂಬಿಲ ಉಪಸ್ಥಿತರಿದ್ದರು.
Next Story