ಆ.14: ಮಂಗಳೂರಿನ ವಿವಿಧೆಡೆ ವಿದ್ಯುತ್ ವ್ಯತ್ಯಯ
ಮಂಗಳೂರು, ಆ.12: ನಗರದ ನಂದಿಗುಡ್ಡ ಹಾಗೂ ಕುದ್ರೋಳಿ ಉಪಕೇಂದ್ರಗಳಿಂದ ಹೊರಡುವ ಫೀಡರ್ಗಳಲ್ಲಿ ವಿವಿಧ ದುರಸ್ತಿ ಕಾಮಗಾರಿ ಹಮ್ಮಿಕೊಂಡಿರುವುದರಿಂದ ಆ.14ರಂದು ಬೆಳಗ್ಗೆ 10ರಿಂದ ಸಂಜೆ 5 ಗಂಟೆವರೆಗೆ ವಿದ್ಯುತ್ ಸರಬರಾಜಿನಲ್ಲಿ ವ್ಯತ್ಯಯವಾಗಲಿದೆ.
ನಂದಿಗುಡ್ಡ: ನಗರದ 33/11 ಕೆವಿ ನಂದಿಗುಡ್ಡ ಉಪಕೇಂದ್ರದಿಂದ ಹೊರಡುವ 11 ಕೆವಿ ಬೋಳಾರ ಮತ್ತು 11 ಕೆವಿ ಮಂಗಳಾದೇವಿ ಫೀಡರ್ಗಳಲ್ಲಿ ದುರಸ್ತಿ ಕಾಮಗಾರಿ ಹಮ್ಮಿಕೊಳ್ಳಲಾಗಿದೆ. ಇದರಿಂದ ಮಾರ್ನಮಿ ಕಟ್ಟೆ ಸರ್ಕಲ್, ಮಂಗಳಾದೇವಿ ಸರ್ಕಲ್, ಜೆಪ್ಪು ಮಾರ್ಕೆಟ್ ರೋಡ್, ಮುಳಿಹಿತ್ಲು ಕ್ರಾಸ್, ಮುಳಿಹಿತ್ಲು, ಬೋಳಾರ ಮೈನ್ ರೋಡ್, ಹೊಯ್ಗೆಬಝಾರ್, ಬೋಳಾರ ಫೆರ್ರಿರೋಡ್, ಮಂಗಳಾನಗರ, ಸುಭಾಷ್ ನಗರ, ಶಿವನಗರ, ಪಾಂಡೇಶ್ವರ, ಎಮ್ಮೆಕೆರೆ, ಗೂಡ್ಶೆಡ್, ಮಂಕೀ ಸ್ಟಾಂಡ್, ಮಂಗಳಾದೇವಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
ಕುದ್ರೋಳಿ: ನಗರದ 33/11 ಕೆವಿ ಕುದ್ರೋಳಿ ಉಪಕೇಂದ್ರದಿಂದ ಹೊರಡುವ 11 ಕೆವಿ ಡೊಂಗರಕೇರಿ ಫೀಡರ್ನಲ್ಲಿ ವಿವಿಧ ದುರಸ್ತಿ ಕಾಮಗಾರಿ ನಡೆಯಲಿದೆ. ಅಂದು ಸಿಟಿ ಸೆಂಟರ್, ಕೊಡಿಯಾಲ್ ಬೈಲ್, ಜಿಲ್ಲಾ ನ್ಯಾಯಾಲಯ, ಕರ್ನಾಟಕ ಬ್ಯಾಂಕ್, ಅಲೋಶಿಯಸ್ ಕಾಲೇಜ್, ಜಯಶ್ರೀ ಆಸ್ಪತ್ರೆ, ಮನೋರಮಾ ಹೋಟೆಲ್, ಪಂಚವಟಿ ಲೇನ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ ಎಂದು ಮೆಸ್ಕಾಂ ಪ್ರಕಟನೆ ತಿಳಿಸಿದೆ.