ಕೊಲ್ಲರಕೋಡಿ: ಡಿವೈಎಫ್ಐ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ
ಕೊಲ್ಲರಕೋಡಿ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಪ್ರಯುಕ್ತ ಡಿವೈಎಫ್ಐ ಕೊಲ್ಲರಕೋಡಿ ಘಟಕದ ವತಿಯಿಂದ ಧ್ವಜಾರೋಹಣ ಕಾರ್ಯಕ್ರಮವು ಕೊಲ್ಲರಕೋಡಿಯಲ್ಲಿ ರವಿವಾರ ನಡೆಯಿತು.
ಇಬ್ರಾಹಿಂ ಹಾಜಿ ಪಾರೆ ಧ್ವಜಾರೋಹಣಗೈದರು. ಮುಖ್ಯ ಅತಿಥಿಯಾಗಿ ಡಿವೈಎಫ್ಐ ಉಳ್ಳಾಲ ವಲಯ ಉಪಾಧ್ಯಕ್ಷ ರಝಾಕ್ ಮೊಂಟೆಟೆಪದವು ಆಗಮಿಸಿ, ಸಂದೇಶ ಭಾಷಣ ಮಾಡಿದರು.
ಈ ಸಂದರ್ಭ ಕೊಲ್ಲರಕೋಡಿ ಡಿವೈಎಫ್ಐ ಘಟಕದ ಗೌರವಾಧ್ಯಕ್ಷ ಶರೀಫ್, ಅಧ್ಯಕ್ಷ ಆಸಿಫ್ ಕೆ.ಎಚ್, ಕಾರ್ಯದರ್ಶಿ ಶಬೀರ್, ಮೊಯ್ದಿನ್ ಕುಂಞಿ, ಡಿವೈಎಫ್ಐ ಕಾರ್ಯಕರ್ತರು, ಊರಿನ ಹಿರಿಯರು ಹಾಗು ಯುವಕರು ಉಪಸ್ಥಿತರಿದ್ದರು.
ಆಮಿರ್ ಮೀನಂಗೋಡಿ ಸ್ವಾಗತಿಸಿ, ವಂದಿಸಿದರು.