ಪ್ರಬಂಧ ಸ್ಪರ್ಧಾ ವಿಜೇತರಿಗೆ ಬಹುಮಾನ ವಿತರಣೆ
ದೇರಳಕಟ್ಟೆ, ಆ.20: ಡಾ.ಅಬ್ದುಲ್ ಶಕೀಲ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಸ್ವಾತಂತ್ರ್ಯ ದಿನಾಚರಣೆ ಪ್ರಯುಕ್ತ ನಡೆದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಿಗೆ ಬಹುಮಾನ ವಿತರಣಾ ಕಾರ್ಯಕ್ರಮ ದೇರಳಕಟ್ಟೆ ದುಬೈ ಪ್ಲಾಝಾದಲ್ಲಿ ನಡೆಯಿತು.ಪ್ರಬಂಧದಲ್ಲಿ ಪ್ರಥಮ ಸ್ಥಾನ ಪಡದೆ ರಾಮಾಂಜಿ ನಮ್ಮಭೂಮಿ ಅವರಿಗೆ 11,111 ರೂ. ಹಾಗೂ ದ್ವಿತೀಯ ಸ್ಥಾನ ಪಡೆದ ಆಯಿಷತ್ ಅಫ್ರಾ ಅವರಿಗೆ 7,777ರೂ. ಮತ್ತು ತೃತೀಯ ಸ್ಥಾನ ಪಡೆದ 50 ಮಂದಿ ವಿದ್ಯಾರ್ಥಿಗಳಿಗೆ ಪ್ರಶಸ್ತಿ ಪತ್ರ, ಸ್ಮರಣೆಗೆ ನೀಡಿ ಗೌರವಿಸಲಾಯಿತು.
ಬೆಳ್ಮ ಗ್ರಾಪಂ ಅಧ್ಯಕ್ಷ ಅಬ್ದುಲ್ ಸತ್ತಾರ್ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ಮಂಗಳೂರು ವಿವಿಯ ಪ್ರಾಧ್ಯಾಪಕ ಡಾ. ಪ್ರಶಾಂತ್ ಅತಿಥಿಯಾಗಿ ಭಾಗವಹಿಸಿದ್ದರು.ಕಾರ್ಯಕ್ರಮದಲ್ಲಿ ದೇರಳಕಟ್ಟೆ ದ.ಕ ಹಿ.ಪ್ರಾ. ಶಾಲೆಯ ಅಭಿವೃಧಿ ಸಮಿತಿಯ ಸಂಚಾಲಕ ಅಬ್ದುಲ್ ಖಾದರ್ ಐ., ಗ್ರಾಪಂ ಸದಸ್ಯರಾದ ಇಬ್ರಾಹಿಂ ಬದ್ಯಾರ್, ಇಕ್ಬಾಲ್ ಎಚ್.ಆರ್, ಉದ್ಯಮಿ ಸಿದ್ದೀಕ್ ಅಹ್ಮದ್ ಗ್ಲಾಡ್, ಟ್ರಸ್ಟಿನ ಮ್ಯಾನೇಜರ್ ನೌಫಲ್ ಬಿ., ಟ್ರಸ್ಟ್ನ ಕಾರ್ಯಕರ್ತರಾದ ಶಿಹಾಬ್ ತಂಙಳ್, ಮುದಶಿರ್, ನಝೀರ್ ಕೆ.ಸಿ. ರೋಡು, ಜವೀದ್ ಬದ್ಯಾರ್ ಮತ್ತಿತತರರು ಉಪಸ್ಥಿತರಿದ್ದರು.