ಸಚಿವ ಸುನೀಲ್ಗೆ 5.20 ಲಕ್ಷ ರೂ. ಮೌಲ್ಯದ 3009 ಪುಸ್ತಕಗಳ ಕೊಡುಗೆ
ಉಡುಪಿ, ಸೆ.8: ಇಂಧನ ಹಾಗೂ ಕನ್ನಡ ಮತ್ತು ಸಂಸ್ಕೃತಿ ಸಚಿವ ಸುನೀಲ್ ಕುಮಾರ್ ಅವರಿಗೆ ಈವರೆಗೆ ಕಾರ್ಕಳ, ಉಡುಪಿ ಹಾಗೂ ಬೆಂಗಳೂರಿನಲ್ಲಿ ಅಭಿನಂಧನೆಯಾಗಿ ಹಾರ ತುರಾಯಿ ಬದಲು ಸುಮಾರು 5,20,594 ರೂ. ಮೌಲ್ಯ 3009 ಪುಸ್ತಕಗಳು ನೀಡಲಾಗಿದೆ.
ಸಚಿವರಾಗಿ ಆಯ್ಕೆಯಾದ ಸಂದರ್ಭ ಸುನೀಲ್ ಕುಮಾರ್ ಅಭಿನಂದನೆ ರೂಪವಾಗಿ ಹಾರ ತುರಾಯಿ ಬದಲು ಪುಸ್ತಕ ನೀಡಿದರೆ ಗ್ರಂಥಾಲಯಕ್ಕೆ ಒಪ್ಪಿ ಸುವುದಾಗಿ ಹೇಳಿದ್ದರು. ಹೀಗೆ ಸಚಿವರಿಗೆ ಅಭಿನಂದನೆಯಾಗಿ ಹಿಂದೂ ಧಾರ್ಮಿಕ ಗ್ರಂಥಗಳು, ಕಾದಂಬರಿ, ಯಕ್ಷಗಾನ, ನಾಟಕ, ಮಹಾನ್ ಪುರುಷರ ಲೇಖನ, ಕಾನೂನು, ಸಂವಿಧಾನ ಪುಸ್ತಕಗಳು ಕೊಡುಗೆಯಾಗಿ ದೊರೆತಿವೆ.
ಈ ಪುಸ್ತಕಗಳ ಪ್ರದರ್ಶನ ಮತ್ತು ಗ್ರಂಥಾಲಯಕ್ಕೆ ಹಸ್ತಾಂತರ ಕಾರ್ಯಕ್ರಮವು ಸೆ.9ರಂದು ಸಂಜೆ 4ಗಂಟೆಗೆ ಕಾರ್ಕಳದ ವಿಕಾಸ ಕಚೇರಿಯಲ್ಲಿ ನಡೆಯಲಿದೆ. ಇದರಲ್ಲಿ ಉಡುಪಿ ಮತ್ತು ದ.ಕ. ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರು ಮತ್ತು ಸಾಹಿತಿಗಳು ಭಾಗವಹಿಸಲಿದ್ದಾರೆ ಎಂದು ಸಚಿವರ ಆಪ್ತ ಸಹಾಯಕ ಹರೀಶ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story