ಮಂಗಳೂರು: ಎಜೆ ಆಸ್ಪತ್ರೆಯಲ್ಲಿ ರೋಗಿಗಳ ವಿಶ್ವ ಸುರಕ್ಷತಾ ದಿನಾಚರಣೆ
ಮಂಗಳೂರು : ‘ತಾಯಿ ಮತ್ತು ನವಜಾತ ಶಿಶುಗಳ ಆರೈಕೆ’ ಧ್ಯೇಯವಾಕ್ಯದೊಂದಿಗೆ ಈ ವರ್ಷದ ರೋಗಿಗಳ ವಿಶ್ವ ಸುರಕ್ಷತಾ ದಿನವನ್ನು ನಗರದ ಎಜೆ ಆಸ್ಪತ್ರೆಯಲ್ಲಿ ಆಚರಿಸಲಾಯಿತು.
ವಿವಿಧ ವಿಭಾಗಗಳ ತಜ್ಞ ವೈದ್ಯರಾದ ಡಾ. ಮಂಜುನಾಥ್ ಕಾಮತ್, ಡಾ. ಮಂಜುನಾಥ್ ಬಿ.ವಿ., ಡಾ. ಪ್ರೇಮ್ ಆಳ್ವ, ಡಾ. ನವೀನ್ ರುಡಾಲ್ಫ್ ರಾಡ್ರಿಗಸ್, ಡಾ. ಸುದೇಶ್ ರಾವ್, ಡಾ. ರೋಹಿತ್ ಮೊದಲಾದವರು ರೋಗಿಗಳ ಸುರಕ್ಷತಾ ಮಾರ್ಗಸೂಚಿಗಳ ಪಾಲನೆಯ ಪ್ರಾಮುಖ್ಯತೆ ಬಗ್ಗೆ ಮಾಹಿತಿ ನೀಡಿದರು.
ಈ ಸಂದರ್ಭ ಮಾತನಾಡಿದ ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕರಾದ (ಆಡಳಿತ) ಡಾ. ಅಮಿತ ಪಿ. ಮಾರ್ಲ, ರೋಗಿಗಳ ಸುರಕ್ಷತಾ ಮಾರ್ಗಸೂಚಿಗಳನ್ನು ಅನುಷ್ಠಾನಗೊಳಿಸುವ ಮತ್ತು ಅನುಸರಿಸುವ ಪ್ರಾಮುಖ್ಯತೆಯನ್ನು ವಿವರಿಸಿದರು.
ಈ ಸಂದರ್ಭ ಆಯೋಜಿಸಿದ ಇ- ಪೋಸ್ಟರ್ ಸ್ಪರ್ಧೆಯಲ್ಲಿ ಸಿಬ್ಬಂದಿ ಮತ್ತು ಎಂಎಚ್ಎ ವಿದ್ಯಾರ್ಥಿಗಳು ಭಾಗವಹಿಸಿದ್ದರು. ರೋಗಿಗಳ ಸುರಕ್ಷತಾ ಪ್ರಮಾಣ ವಚನ ಸ್ವೀಕರಿಸುವುದರೊಂದಿಗೆ ಕಾರ್ಯಕ್ರಮ ಮುಕ್ತಾಯಗೊಂಡಿತು.
Next Story