ದೋಣಿಯಿಂದ ನದಿಗೆ ಬಿದ್ದು ಮೃತ್ಯು
ಗಂಗೊಳ್ಳಿ, ಸೆ.18: ಮೀನುಗಾರಿಕೆ ನಡೆಸುತ್ತಿದ್ದ ವೇಳೆ ದೋಣಿಯಿಂದ ಆಯತಪ್ಪಿ ನದಿಗೆ ಬಿದ್ದು ಮೀನುಗಾರರೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಗಂಗೊಳ್ಳಿ ಮಲ್ಯರಬೆಟ್ಟು ನಿವಾಸಿ ಮಂಜುನಾಥ ಖಾರ್ವಿ ಎಂಬವರ ಮಗ ದೇವೇಂದ್ರ ಖಾರ್ವಿ(35) ಎಂದು ಗುರುತಿಸಲಾಗಿದೆ. ಇವರು ಸೆ.16ರಂದು ಸಂಜೆ ಗಂಗೊಳ್ಳಿ ಬಂದರಿನಿಂದ ಪಾತಿ ದೋಣಿಯಲ್ಲಿ ಮೀನು ಗಾರಿಕೆಗೆ ತೆರಳಿದ್ದರು. ಈ ವೇಳೆ ಇವರು ದೋಣಿಯಿಂದ ಆಯಾ ತಪ್ಪಿ ನೀರಿಗೆ ಬಿದ್ದು ನಾಪತ್ತೆಯಾಗಿದ್ದರು. ರಾತ್ರಿ ಇವರ ದೋಣಿ ಗಂಗೊಳ್ಳಿ ಬಂದರಿನ ನದಿಯಲ್ಲಿ ಪತ್ತೆಯಾಗಿತ್ತು.
ಸೆ.18ರಂದು ಬೆಳಗ್ಗೆ 7.45ರ ಸುಮಾರಿಗೆ ದೇವೇಂದ್ರ ಖಾರ್ವಿಯ ಮೃತ ದೇಹವು ಗಂಗೊಳ್ಳಿ ಪಂಚಗಂಗಾವಳಿ ನದಿ ತೀರದ ಕಳವಿನ ಬಾಗಿಲು ಎಂಬಲ್ಲಿ ಪತ್ತೆಯಾಗಿದೆ. ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖ ಲಾಗಿದೆ.
Next Story