ದಿವಾಕರ ಆಚಾರ್ಯ
ಉಡುಪಿ, ಸೆ.20: ಅಂಬಾಗಿಲಿನ ದೀಪಾ ವೆಲ್ಡಿಂಗ್ ವರ್ಕ್ಸ್ ನ ಮಾಲಕ ದಿವಾಕರ ಆಚಾರ್ಯ (51) ಅಲ್ಪಕಾಲದ ಅಸೌಖ್ಯದಿಂದ ಸೋಮವಾರ ನಿಧನರಾದರು. ಅವರು ಪತ್ನಿ ಹಾಗೂ ಪುತ್ರಿಯನ್ನು ಅಗಲಿದ್ದಾರೆ.
ದಿವಾಕರ ಆಚಾರ್ಯರ ನಿಧನಕ್ಕೆ ಶಾಸಕ ಕೆ.ರಘುಪತಿ ಭಟ್, ನಿಟ್ಟೂರು ಶಾಲಾ ಆಡಳಿತ ಮಂಡಳಿ ಕಾರ್ಯದರ್ಶಿ ಮುರಲಿ ಕಡೆಕಾರ್, ಮುಖ್ಯ ಶಿಕ್ಷಕಿ ಅನಸೂಯ, ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಯೋಗೀಶ್ಚಂದ್ರಾಧರ ಹಾಗೂ ಕಾರ್ಯದರ್ಶಿ ಸಿ.ಎ ಪ್ರದೀಪ ಜೋಗಿ ಸಂತಾಪ ವ್ಯಕ್ತಪಡಿಸಿದ್ದಾರೆ.
Next Story