ನದಿಯಲ್ಲಿ ಈಜುತ್ತಿದ್ದ ಯುವಕ ನೀರುಪಾಲು
ಗಂಗೊಳ್ಳಿ, ಸೆ.20: ತ್ರಾಸಿ ಗ್ರಾಮದ ಮೋವಾಡಿಯ ನಾಡಾ ಸೇತುವೆ ಬಳಿ ಸೌಪರ್ಣಿಕ ನದಿಯಲ್ಲಿ ಈಜುತ್ತಿದ್ದ ಯುವಕನೋರ್ವ ನೀರಿನಲ್ಲಿ ಮುಳುಗಿ ನಾಪತ್ತೆಯಾಗಿರುವ ಘಟನೆ ಸೆ.19ರಂದು ಮಧ್ಯಾಹ್ನ 12.30ರ ಸುಮಾರಿಗೆ ನಡೆದಿದೆ.
ಗುಜ್ಜಾಡಿ ಗ್ರಾಮದ ಹೋಲಿ ಕ್ರಾಸ್ ಹತ್ತಿರ ನಿವಾಸಿ ದಿನೇಶ್ ಎಂಬವರ ಮಗ ಮಹೇಂದ್ರ(24) ನಾಪತ್ತೆಯಾದ ಯುವಕ. ಇವರು ತನ್ನ ಸ್ನೇಹಿತ ರಾದ ಆಶಿಕ್ ಹಾಗೂ ಶರತ್ ಎಂಬವರೊಂದಿಗೆ ಸೌಪರ್ಣಿಕ ನದಿಯಲ್ಲಿ ಈಜಲು ಹೋಗಿದ್ದರು. ಅಲ್ಲಿ ಶರತ್ ನೀರಿಗೆ ಇಳಿಯದೆ ಸೇತುವೆ ಮೇಲೆ ನಿಂತಿದ್ದು, ನೀರಿನಲ್ಲಿ ಈಜುತ್ತಿದ್ದ ಮಹೇಂದ್ರ ನೀರಿನ ಸುಳಿಗೆ ಸಿಕ್ಕಿ ಮುಳುಗಿ ಕೊಚ್ಚಿಕೊಂಡು ಹೋಗಿ ನಾಪತ್ತೆಯಾಗಿದ್ದಾರೆ. ಇವರಿಗಾಗಿ ಹುಡುಕಾಟ ನಡೆಸಲಾಗುತ್ತಿದ್ದು, ಈವರೆಗೂ ಪತ್ತೆಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story