ಹೆಬ್ರಿ: ಆಸ್ಕರ್ ಫೆರ್ನಾಂಡಿಸ್ ಗೆ ಶ್ರದ್ಧಾಂಜಲಿ ಸಭೆ
ಹೆಬ್ರಿ, ಸೆ.21: ಇತ್ತೀಚೆಗೆ ನಿಧನರಾದ ಮಾಜಿ ಕೇಂದ್ರ ಸಚಿವ ಆಸ್ಕರ್ ಫೆರ್ನಾಂಡಿಸ್ ಅವರಿಗೆ ಸಂತಾಪ ಸೂಚಕ ಸಭೆಯು ಹೆಬ್ರಿ ಬ್ಲಾಕ್ ಕಾಂಗ್ರೆಸ್ ವತಿಯಿಂದ ಚೈತನ್ಯ ಯುವ ವೃಂದದ ಸಭಾಂಗಣದಲ್ಲಿ ಜರಗಿತು.
ಹೆಬ್ರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಮಂಜುನಾಥ ಪೂಜಾರಿ ನುಡಿನಮನ ಸಲ್ಲಿಸಿ, ಉಡುಪಿ ಹೆಬ್ರಿ ತೀರ್ಥಹಳ್ಳಿ ರಾಷ್ಟ್ರೀಯ ಹೆದ್ದಾರಿ ಆಸ್ಕರ್ ನಾಡಿಗೆ ನೀಡಿದ ಬಹುದೊಡ್ಡ ಶಾಶ್ವತ ಕೊಡುಗೆ. ಆಸ್ಕರ್ ಯಾವುದೇ ಹುದ್ದೆಗಳ ಹಿಂದೆ ಹೋದವರಲ್ಲ. ಅಂದು ಕಾರ್ಮಿಕನಾಗಿದ್ದ ಆಸ್ಕರ್ ತನಗೆ ದೊರೆತ ಕೇಂದ್ರ ಕಾರ್ಮಿಕ ಖಾತೆಗೆ ನ್ಯಾಯ ನೀಡಿ ಬವರ ಸೇವೆ ಮಾಡಿದ್ದರು ಎಂದರು.
ಜಿಲ್ಲಾ ಕಾಂಗ್ರೆಸ್ ಉಪಾಧ್ಯಕ್ಷ ನೀರೆ ಕೃಷ್ಣ ಶೆಟ್ಟ, ಮಹಿಳಾ ಕಾಂಗ್ರೆಸ್ ಅಧ್ಯಕ್ಷೆ ರಂಜನಿ ಹೆಬ್ಬಾರ್, ಯುವ ಕಾಂಗ್ರೆಸ್ಅಧ್ಯಕ್ಷ ಹುತ್ತುರ್ಕೆ ದಿನೇಶ ಶೆಟ್ಟಿ, ಹೆಬ್ರಿ ಬ್ಲಾಕ್ ಕಾರ್ಯದರ್ಶಿ ಎಚ್.ಜನಾರ್ದನ್, ರಾಘವ ದೇವಾಡಿಗ, ಎಚ್. ರಾಜೇಶ ಭಂಡಾರಿ, ಶ್ವೇತ ಕುಮಾರ್, ಸಂತೋಷ ಕುಮಾರ್, ಕೆ. ಚಂದ್ರಶೇಖರ ಬಾಯರಿ, ಶಿವರಾಮ ಪೂಜಾರಿ, ಆಸ್ಟಿನ್ ರಾಡ್ರಿಗಸ್, ರವಿ ಪೂಜಾರಿ, ಶಶಿಕಲಾ ಡಿ.ಪೂಜಾರಿ, ಜಯಲಕ್ಷ್ಮೀ ಮೊದಲಾದವರು ಉಪಸ್ಥಿತರಿದ್ದರು.