ಉಡುಪಿ: ವಾಣಿಜ್ಯ ತೆರಿಗೆ ಉಪ ಆಯುಕ್ತರ ಕರ್ತವ್ಯಕ್ಕೆ ಅಡ್ಡಿ; ಆರೋಪ
ಉಡುಪಿ, ಸೆ.22: ವಾಣಿಜ್ಯ ತೆರಿಗೆ ಉಪಆಯುಕ್ತ ಭರತ್ ಕುಮಾರ್ ಹೆಗ್ಡೆ (44) ಎಂಬವರಿಗೆ ಬೆದರಿಕೆ ಹಾಕಿ ಕರ್ತವ್ಯ ಅಡ್ಡಿ ಪಡಿಸಿರುವ ಕುರಿತು ಉಡುಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಇವರು ಸೆ.20ರಂದು ಸಂಜೆ ಉಡುಪಿಯ ಕಛೇರಿಯಲ್ಲಿರುವಾಗ ವಿಕ್ರಮ್ ಪೈ ಎಂಬಾತ ಬಂದು, ಆ.25ರಂದು ಸರಿಯಾದ ದಾಖಲೆಗಳಿಲ್ಲದೆ ಸಾಗಿಸುತ್ತಿದ್ದ ಅಡಿಕೆಯನ್ನು ತಡೆದು ಕ್ರಮ ಕೈಗೊಂಡಿರುವ ವಿಷಯವನ್ನು ಪ್ರಸ್ತಾಪಿಸಿದನು. ಬಳಿಕ ಭರತ್ರನ್ನು ಉಡುಪಿಯಿಂದ ವರ್ಗಾವಣೆ ಮಾಡಿಸಿರುವುದಾಗಿ ಹೇಳಿ ಮುಂದಿನ 10 ದಿನಗಳಲ್ಲಿ ವರ್ಗಾವಣೆ ಆದೇಶವು ಜಾರಿಯಾಗುತ್ತದೆ ಎಂದು ಬೆದರಿಸಿ ಕಛೇರಿ ಕರ್ತವ್ಯಕ್ಕೆ ಅಡ್ಡಿ ಉಂಟು ಪಡಿಸಿರುವುದಾಗಿ ದೂರಿನಲ್ಲಿ ತಿಳಿಸಲಾಗಿದೆ.
Next Story