ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ನಿಂದ ವಿವಿಧ ಕಾರ್ಯಕ್ರಮ
ಸುರತ್ಕಲ್, ಸೆ.25: ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ವತಿಯಿಂದ ರೂಟ್ ಆಫ್ ರೂಟ್ ಹಳೆ ಮತ್ತು ಹೊಸ ನಾಯಕರ ಸಂಗಮ, ಗೈಡೆನ್ಸ್ ಗಿಲ್ಡ್ ಸಮಾರೋಪ, ಬೇಕಲ್ ಉಸ್ತಾದ್ ಮತ್ತು ಎಡಪ್ಪಾಲ ಮಹ್ಮೂದ್ ಮುಸ್ಲಿಯಾರ್ರ ಅನುಸ್ಮರಣೆ ಕಾರ್ಯಕ್ರಮವು ಡಿವಿಷನ್ ಅಧ್ಯಕ್ಷ ಹನೀಫ್ ಅಹ್ಸನಿ ಕಾಮಿಲ್ ಸಖಾಫಿ ಶೇಡಿಗುರಿಯ ಅಧ್ಯಕ್ಷತೆಯಲ್ಲಿ ಕಾಟಿಪಳ್ಳ ಸುನ್ನೀ ಸೆಂಟರ್ನಲ್ಲಿ ನಡೆಯಿತು.
ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಮಾಜಿ ಉಪಾಧ್ಯಕ್ಷ ಹಸನ್ ಝುಹ್ರಿ ಮಂಗಳಪೇಟೆ ಉದ್ಘಾಟಿಸಿದರು. ಎಸ್ಸೆಸ್ಸೆಫ್ ದ.ಕ ಜಿಲ್ಲಾ ಮಾಜಿ ಅಧ್ಯಕ್ಷ ವಿ.ಯು. ಇಸ್ಹಾಕ್ ಝುಹ್ರಿ ಸೂರಿಂಜೆ ವಿಷಯ ಮಂಡಿಸಿದರು.
ಕಾರ್ಯಕ್ರಮದಲ್ಲಿ ಎಸ್ಸೆಸ್ಸೆಫ್ ಸುರತ್ಕಲ್ ಡಿವಿಷನ್ ಮಾಜಿ ನಾಯಕರಾದ ವಿ.ಯು ಅಬ್ದುನ್ನಾಸಿರ್ ಮದನಿ, ಹಾಜಿ ಅಬ್ದುರ್ರಹ್ಮಾನ್ ಪ್ರಿಂಟೆಕ್, ಮುಹಮ್ಮದಲಿ ಮುಕ್ಕ, ಹಾಜಿ ಮುಹಮ್ಮದ್ ಆಸಿಫ್ ಕೃಷ್ಣಾಪುರ, ಹೈದರ್ ಮದನಿ ಸೂರಿಂಜೆ, ಅಬ್ದುಲ್ ಲತೀಫ್ ಸಖಾಫಿ ಕಿನ್ನಿಗೋಳಿ, ಬಶೀರ್ ಹಿಮಮಿ ಜೋಕಟ್ಟೆ, ಇಸ್ಮಾಯಿಲ್ ನಈಮಿ ಮಂಗಳಪೇಟೆ, ತಮೀಮ್ ಕೃಷ್ಣಾಪುರ, ಬಶೀರ್ ಕಾನ, ಫಾರೂಕ್ ಶೇಡಿಗುರಿ, ರಝಾಕ್ ಕಾನ, ಹಕೀಮ್ ಸಖಾಫಿ ಕಾಟಿಪಳ್ಳ, ಫಾರೂಕ್ ಕಾಟಿಪಳ್ಳ, ಸಿದ್ದೀಕ್ ಕಿನ್ನಿಗೋಳಿ, ದ.ಕ ವೆಸ್ಟ್ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಹೈದರ್ ಅಲಿ 4ನೇ ಬ್ಲಾಕ್, ದ.ಕ ವೆಸ್ಟ್ ಜಿಲ್ಲಾ ದಅವಾ ಕಾರ್ಯದರ್ಶಿ ಆರೀಫ್ ಝಹುರಿ ಮುಕ್ಕ, ದ.ಕ ವೆಸ್ಟ್ ಜಿಲ್ಲೆ ದಅವಾ ಕನ್ವೀನರ್ ಉಮರುಲ್ ಫಾರೂಕ್ ಸಖಾಫಿ ಕಾಟಿಪಳ್ಳ, ದ.ಕ ವೆಸ್ಟ್ ಜಿಲ್ಲೆ ಸದಸ್ಯ ರಫೀಕ್ 3ನೇ ಬ್ಲಾಕ್ ಉಪಸ್ಥಿತರಿದ್ದರು.
ಸುರತ್ಕಲ್ ಡಿವಿಷನ್ ಪ್ರಧಾನ ಕಾರ್ಯದರ್ಶಿ ಮುಹಮ್ಮದ್ ತನ್ಸೀರ್ 4ನೇ ಬ್ಲಾಕ್ ಸ್ವಾಗತಿಸಿದರು. ಹಣಕಾಸು ಕಾರ್ಯದರ್ಶಿ ತೌಸೀಫ್ ಬದ್ರಿಯನಗರ ವಂದಿಸಿದರು.