ಹೊಟೇಲ್ ನೌಕರ ಆತ್ಮಹತ್ಯೆ
ಬೈಂದೂರು, ಸೆ.25: ಹೊಟೇಲ್ ಉದ್ಯೋಗಕ್ಕಾಗಿ ಮಾಡಿರುವ ಸಾಲವನ್ನು ಮರು ಪಾವತಿಸಲಾಗದೆ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ಸೆ.24ರಂದು ಸಂಜೆ ವೇಳೆ ನಡೆದಿದೆ.
ಮೃತರನ್ನು ಮಯ್ಯಡಿ ಸೂರ್ಕುಂದ ನಿವಾಸಿ ರಾಮ ಮೊಗವೀರ ಎಂಬವರ ಮಗ ರವಿ ಮೊಗವೀರ(35) ಎಂದು ಗುರುತಿಸಲಾಗಿದೆ. ಇವರು ಶಿರೂರಿನ ಹೊಟೇಲ್ ಕೆಲಸ ಮಾಡಿಕೊಂಡಿದ್ದು ಈ ಬಗ್ಗೆ ಬ್ಯಾಂಕಿನಿಂದ ಸಾಲ ಪಡೆದು ಕೊಂಡಿದ್ದರು. ಈ ಸಾಲವನ್ನು ಮರುಪಾವತಿಸಲಾಗದೆ ಚಿಂತೆಯಿಂದ ಇವರು ಸೆ.20ರಂದು ರಾತ್ರಿ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು. ತೀವ್ರವಾಗಿ ಅಸ್ವಸ್ಥಗೊಂಡು ಆಸ್ಪತ್ರೆಯಲ್ಲಿ ದಾಖಲಾಗಿದ್ದ ಇವರು, ಸೆ.24ರಂದು ಸಂಜೆ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆ ಯಲ್ಲಿ ಪ್ರಕರಣ ದಾಖಲಾಗಿದೆ.
Next Story