ಉಪ್ಪಿನಂಗಡಿ; ಅಪಘಾತದಲ್ಲಿ ತಾಯಿ-ಮಗು ಮೃತ್ಯು ಕುರಿತು ವಿಕೃತ ಕಮೆಂಟ್ ಹಾಕಿದ ಆನಂದ್ ವಿರುದ್ಧ ದೂರು
ಉಪ್ಪಿನಂಗಡಿ: ಇಲ್ಲಿನ ಬಸ್ ನಿಲ್ದಾಣದಲ್ಲಿ ಕೆಎಸ್ಸಾರ್ಟಿಸಿ ಬಸ್ ಢಿಕ್ಕಿ ಹೊಡೆದು ತಾಯಿ, ಮಗು ಮೃತಪಟ್ಟ ಘಟನೆಯ ಕುರಿತಂತೆ ಸಾಮಾಜಿಕ ಜಾಲತಾಣದಲ್ಲಿ ವಿಕೃತವಾಗಿ ಕಮೆಂಟ್ ಹಾಕಿ ಸಂಭ್ರಮಿಸಿದ ವ್ಯಕ್ತಿಯ ವಿರುದ್ಧ ಎಸ್ಡಿಪಿಐ ಪಕ್ಷ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದೆ.
ಉಪ್ಪಿನಂಗಡಿಯ ಬಸ್ ನಿಲ್ದಾಣದಲ್ಲಿ ಮಂಗಳವಾರ ಕೆಎಸ್ಸಾರ್ಟಿಸಿ ಬಸ್ ಹರಿದು ಸಾಹಿದಾ (25) ಹಾಗೂ ಅವರ ಒಂದು ವರ್ಷದ ಪುತ್ರ ಸಾಹಿಲ್ ದಾರುಣವಾಗಿ ಮೃತಪಟ್ಟಿದ್ದರು. ಇವರ ಜೀವಹಾನಿಗೆ ಇಡೀ ಊರಿಗೆ ಊರೇ ಶೋಕ ವ್ಯಕ್ತಪಡಿಸುತ್ತಿದ್ದರೆ, ಡೈವರ್ ಆನಂದ ಎಂಬಾತ ಸಾಮಾಜಿಕ ಜಾಲತಾಣದಲ್ಲಿ ಈ ಬಗ್ಗೆ ವಿಕೃತವಾಗಿ ಕಮೆಂಟ್ ಹಾಕಿ ಈ ಘಟನೆಯನ್ನು ಸಂಭ್ರಮಿಸಿದ್ದ. ಈ ಬಗ್ಗೆ ಎಸ್ಡಿಪಿಐ ಪಕ್ಷದ ಉಪ್ಪಿನಂಗಡಿ ಬ್ಲಾಕ್ ಸದಸ್ಯ ಇಕ್ಬಾಲ್ ಕೆಂಪಿ ಉಪ್ಪಿನಂಗಡಿ ಪೊಲೀಸ್ ಠಾಣೆಗೆ ದೂರು ನೀಡಿದ್ದು, ಈತನ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಮನವಿ ಮಾಡಿದ್ದಾರೆ.
ನಿಯೋಗದಲ್ಲಿ ಎಸ್ಡಿಪಿಐ ಮುಖಂಡರಾದ ಝಕಾರಿಯಾ ಕೊಡಿಪ್ಪಾಡಿ, ಮುಸ್ತಫಾ ಲತೀಫಿ, ಅಬ್ದುಲ್ ಮಜೀದ್ ಮಠ, ಹಸೈನಾರ್ ಇದ್ದರು.