ಹಾಫಿಲ್ ಇದ್ರೀಸ್ ಮುಹಮ್ಮದ್ಗೆ ಸನ್ಮಾನ
ಮಂಗಳೂರು, ಅ.16: ಕುರ್ಆನ್ ಕಂಠಪಾಠ ಮಾಡಿದ ಜಮಾಅತ್ನ ಅಧೀನದ ಹಿಫ್ಲ್ ತರಗತಿಯ ವಿದ್ಯಾರ್ಥಿ ಹಾಫಿಲ್ ಇದ್ರೀಸ್ ಮುಹಮ್ಮದ್ಗೆ ಕೃಷ್ಣಾಪುರದ ಕೇಂದ್ರ ಜುಮ್ಮಾ ಮಸೀದಿಯಲ್ಲಿ ಇತ್ತೀಚೆಗೆ ಸನದು ಕಾರ್ಯಕ್ರಮ ನೆರವೇರಿಸಲಾಯಿತು.
ಕಾರ್ಯಕ್ರಮವನ್ನು ಜಮಾಅತ್ನ ಖಾಝಿ ಅಲ್ಹಾಜ್ ಇ.ಕೆ. ಇಬ್ರಾಹಿಂ ಮುಸ್ಲಿಯಾರ್ ನೆರವೇರಿಸಿದರು. ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಶಾಸಕ ಯು.ಟಿ. ಖಾದರ್ ಆಗಮಿಸಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಜಮಾಅತ್ನ ಅಧ್ಯಕ್ಷ ಹಾಜಿ ಅಹ್ಮದ್ ಜಲೀಲ್ ಬದ್ರಿಯ ವಹಿಸಿದ್ದರು. ಕೇಂದ್ರ ಮಸೀದಿಯ ಖತೀಬ ಪಿ.ಎಂ. ಉಮರ್ ಫಾರೂಕ್, ಉಸ್ತಾದ್ ಹಾಫಿಲ್ ಇಮ್ರಾನ್ ಝಹರಿ ಹಿತವಚನ ನೀಡಿದರು.
ಕಾರ್ಯಕ್ರಮದಲ್ಲಿ ಅಲ್ ಬದ್ರಿಯಾ ಶಾಲೆಯ ಅಧ್ಯಕ್ಷ ಅಬ್ದುಲ್ ಖಾದರ್, ಬಾಂಬೆ ಕೇಂದ್ರ ಮದರಸ ಅಧ್ಯಕ್ಷ ಮನ್ಸೂರ್ ಅಲಿ, ಜಮಾಅತ್ನ ಮಾಜಿ ಅಧ್ಯಕ್ಷ ಹಾಜಿ ಬಿ.ಎಂ. ಮುಮ್ತಾಝ್ ಅಲಿ, ಹಾಜಿ ಟಿ.ಎಂ. ಶರೀಫ್, ಹಾಜಿ ಪಿ.ಎಂ. ಉಸ್ಮಾನ್, ಹಾಜಿ ಬಿ.ಎಚ್. ಮುಹಮ್ಮದ್ ಹಸನ್, ಅಧೀನ ಮಸೀದಿಯ ಖತೀಬ ಮುಸ್ತಫಾ ಸಅದಿ, ಮೌಲಾನ ಅಶ್ರಫ್ ಸಖಾಫಿ, ಮೌಲಾನ ಎಚ್.ಲತೀಫ್ ಮದನಿ, ಜಿಲ್ಲಾ ವಕ್ಫ್ ಸಲಹಾ ಸಮಿತಿಯ ಸದಸ್ಯ ನಝೀರ್ ಮಠ ಭಾಗವಹಿಸಿದ್ದರು.
ಜಮಾಅತ್ನ ಪ್ರಧಾನ ಕಾರ್ಯಾದರ್ಶಿ ಅಬ್ದುಲ್ ಹಮೀದ್ ಎಸ್.ಎಂ. ಸ್ವಾಗತಿಸಿದರು. ಜಮಾಅತ್ನ ಉಪಾಧ್ಯಕ್ಷ ಉಮರುಲ್ ಫಾರೂಕ್, ಜೊತೆ ಕಾರ್ಯದರ್ಶಿ ಹಾಜಿ ಮಯ್ಯದ್ದಿ ಸುಪ್ರೀಂ, ಖಜಾಂಜಿ ಬಿ.ಹುಸೈನಬ್ಬ ಮತ್ತು ಲೆಕ್ಕಪರಿಶೋಧಕ ಯು.ಎಂ. ಬಶೀರ್ ಉಪಸ್ಥಿತರಿದ್ದರು.