‘ಅಮ್ಚೆ ಸಂಸಾರ್’ ಆರ್ಎಸ್ಬಿ ಕೊಂಕಣಿ ಚಲನಚಿತ್ರ ಲೋಕಾರ್ಪಣೆ
ಉಡುಪಿ, ಅ. 26: ಅಮ್ಚೆ ಕ್ರಿಯೇಶನ್ಸ್ ಅರ್ಪಿಸುವ ಆರ್ಎಸ್ಬಿ ಕೊಂಕಣಿ ಯಲ್ಲಿ ನಿರ್ಮಿಸಿದ ಅಮ್ಚೆ ಸಂಸಾರ್ ಚೊಚ್ಚಲ ಚಲನಚಿತ್ರ ವನ್ನು ಚಲನಚಿತ್ರ ನಟ, ನಿರ್ದೇಶಕ ಕಾಸರಗೋಡು ಚಿನ್ನಾ ರವಿವಾರ ಮಣಿಪಾಲ ಕೆನರಾ ಮಾಲ್ನ ಭಾರತ್ ಸಿಮೇವಾಸ್ನಲ್ಲಿ ಲೋಕಾರ್ಪಣೆ ಮಾಡಿದರು.
ಕರ್ನಾಟಕ ಕೊಂಕಣಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ.ಜಗದೀಶ್ ಪೈ, ಉಡುಪಿ ಶಾಸಕ ಕೆ.ರಘುಪತಿ ಭಟ್, ಆರ್ಎಸ್ಬಿ ಸಂಘ ಅಧ್ಯಕ್ಷ ಗೋಕುಲ್ ದಾಸ್ ನಾಯಕ್ ಶುಭಹಾರೈಸಿದರು. ಅಧ್ಯಕ್ಷತೆಯನ್ನು ಉಡುಪಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು ವಹಿಸಿದ್ದರು.
ವೇದಿಕೆಯಲ್ಲಿ ಮಣಿಪಾಲ ಆರ್ಎಸ್ಬಿ ಮಹಿಳಾ ವೇದಿಕೆಯ ಅಧ್ಯಕ್ಷೆ ಮೋಹಿನಿ ನಾಯಕ್, ನಗರಸಭಾ ಅಧ್ಯಕ್ಷೆ ಸುಮಿತ್ರಾ ಆರ್.ನಾಯಕ್, ಉದ್ಯಮಿ ರಾಮಕೃಷ್ಣ ನಾಯಕ್, ಚಲನಚಿತ್ರ ನಿರ್ದೇಶಕ ಪ್ರಕಾಶ್ ಸುವರ್ಣ ಕಟಪಾಡಿ, ವಸಂತ ಆರ್.ನಾಯಕ್ ಮುಂಬೈ, ಜಿಪಂ ಮಾಜಿ ಅಧ್ಯಕ್ಷ ಉಪೇಂದ್ರ ನಾಯಕ್, ಉದ್ಯಮಿ ವಾಸುದೇವಕೃಷ್ಣ ನಾಯಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ತೋಟಮನೆ ರಾಮಚಂದ್ರ ನಾಯಕ್, ಪುಂಡಲೀಕ ಮರಾಠೆ ಅವರನ್ನು ಸನ್ಮಾನಿಸಲಾಯಿತು. ಚಲನಚಿತ್ರದ ಕಥೆ/ನಿರ್ದೇಶಕ ಸಂದೀಪ್ ಕಾಮತ್ ಅಜೆಕಾರು ಸ್ವಾಗತಿಸಿದರು. ಸಿನೇಮಾಟೋಗ್ರಾಫರ್ ಭುವನೇಶ್ ಪ್ರಭು ಹಿರೇಬೆಟ್ಟು ವಂದಿಸಿದರು.