ಹೆಮ್ಮಾಡಿ ಸಿಪಿಎಂ ಶಾಖಾ ಸಮ್ಮೇಳನ
ಕುಂದಾಪುರ, ಅ.27: ಸಿಪಿಐಎಂ ಪಕ್ಷದ ಶಾಖಾ ಸಮ್ಮೇಳನವು ಬುಧವಾರ ನರಸಿಂಹ ದೇವಾಡಿಗ ಅಧ್ಯಕ್ಷತೆಯಲ್ಲಿ ಹೆಮ್ಮಾಡಿಯಲ್ಲಿ ಜರುಗಿತು.
ಸಿಪಿಎಂ ಪಕ್ಷದ ಬೈಂದೂರು ವಲಯ ಕಾರ್ಯದರ್ಶಿ ಸುರೇಶ್ ಕಲ್ಲಾಗರ ಮಾತನಾಡಿ, ಅಖಿಲ ಭಾರತ ಸಮ್ಮೇಳನಕ್ಕೆ ಪೂರ್ವಭಾವಿಯಾಗಿ ಕೆಳಗಿನ ಎಲ್ಲಾ ಹಂತದ ಸಮ್ಮೇಳನಗಳನ್ನು ನಡೆಸಿ ತನ್ನ ನಾಯಕತ್ವವನ್ನು ಆಯ್ಕೆ ಮಾಡುತ್ತದೆ. ಸಿಪಿಎಂ ಪಕ್ಷದಲ್ಲಿ ಆಂತರಿಕ ಪ್ರಜಾಪ್ರಭುತ್ವವಿದೆ ಎಂದರು.
ಮುಖ್ಯ ಅತಿಥಿಯಾಗಿ ಕೋಣಿ ವೆಂಕಟೇಶ್ ನಾಯಕ್ ಹಾಗೂ ಸಂತೋಷ ಹೆಮ್ಮಾಡಿ ಮಾತನಾಡಿದರು. ವಾಸುದೇವಾಡಿಗ ಧ್ವಜಾರೋಹಣ ನೆರವೇರಿಸಿದರು. ಈ ಸಂದರ್ಭದಲ್ಲಿ ವಲಯ ಸಮ್ಮೇಳನಕ್ಕೆ ಪ್ರತಿನಿಧಿ ಆಯ್ಕೆ ಮಾಡ ಲಾಯಿತು. ಕಾರ್ಯದರ್ಶಿ ಜಗದೀಶ ಆಚಾರ್ ವರದಿ ಮಂಡಿಸಿದರು.
Next Story