ಮಂಗಳೂರು: ಬದಲಿ ಮಾರ್ಗದಲ್ಲಿ ಸಂಚರಿಸಲು ಪೊಲೀಸ್ ಆಯುಕ್ತರ ಸೂಚನೆ
ಒಳಚರಂಡಿ ಕಾಮಗಾರಿಯ ಹಿನ್ನೆಲೆ
ಎನ್. ಶಶಿಕುಮಾರ್
ಮಂಗಳೂರು : ನಗರದ ಕದ್ರಿ ಕಂಬಳ ರಸ್ತೆಯ ಒಳಚರಂಡಿ ಮಾರ್ಗದ ಪುನರುಜ್ಜೀವನ ಹಾಗೂ ಬಿಟ್ಟು ಹೋದ ಒಳಚರಂಡಿ ಕಾಮಗಾರಿಯನ್ನು ಕೈಗೊಂಡ ಹಿನ್ನೆಲೆಯಲ್ಲಿ ನ.17ರ ವರೆಗೆ ಆ ರಸ್ತೆಯಲ್ಲಿ ವಾಹನಗಳ ಸಂಚಾರ ಮಾರ್ಗವನ್ನು ಬದಲಾಯಿಸಿ ಮಂಗಳೂರು ನಗರ ಪೊಲೀಸ್ ಆಯುಕ್ತ ಎನ್. ಶಶಿಕುಮಾರ್ ಆದೇಶ ಹೊರಡಿಸಿದ್ದಾರೆ.
ಬದಲಿ ಮಾರ್ಗಗಳು: ಬಿಜೈ ಬಟ್ಟಗುಡ್ಡ ಜಂಕ್ಷನ್ ನಿಂದ-ಕದ್ರಿಕಂಬ್ಳ ಜಂಕ್ಷನ್ವರೆಗಿನ ಕದ್ರಿಕಂಬಳ ರಸ್ತೆಯಲ್ಲಿ ಎಲ್ಲಾ ತರಹದ ವಾಹನಗಳ ಸಂಚಾರವನ್ನು ನಿಷೇಧಿಸಲಾಗಿದೆ.
ಕೆಪಿಟಿ ಜಂಕ್ಷನ್ ಕಡೆಯಿಂದ-ಕದ್ರಿ ಕಂಬಳ ರಸ್ತೆಯ ಮೂಲಕ ನಗರ ಪ್ರವೇಶಿಸುವ ವಾಹನಗಳು ಬಿಜೈ ಜಂಕ್ಷನ್ ಮೂಲಕ ಸಂಚರಿಸಬೇಕು.
ಬಂಟ್ಸ್ ಹಾಸ್ಟೆಲ್, ಕದ್ರಿ ಕಂಬಳ ರಸ್ತೆ ಮೂಲಕ ಕೆಪಿಟಿ ಜಂಕ್ಷನ್ ಕಡೆಗೆ ಸಂಚರಿಸುವ ವಾಹನಗಳು ಮಲ್ಲಿಕಟ್ಟೆ ಜಂಕ್ಷನ್ ಮೂಲಕ ನಂತೂರು ಜಂಕ್ಷನ್ ಕಡೆಗೆ ಸಂಚರಿಸುವಂತೆ ನಗರ ಪೊಲೀಸ್ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story