ಯುವಕ ಆತ್ಮಹತ್ಯೆ
ಗಂಗೊಳ್ಳಿ, ನ.16: ಮೊಬೈಲ್ ನೋಡದಂತೆ ತಂದೆ ಬುದ್ದಿವಾದ ಹೇಳಿದಕ್ಕೆ ಮಗ ಆತ್ಮಹತ್ಯೆ ಮಾಡಿಕೊಂಡ ಘಟನೆ ನ.16ರಂದು ನಸುಕಿನ ವೇಳೆ ದಾಕು ಹಿತ್ಲು ಶೆಟ್ಟಿಮನೆ ಎಂಬಲ್ಲಿ ನಡೆದಿದೆ.
ಮೃತರನ್ನು ಶೆಟ್ಟಿ ಮನೆಯ ಸೂರ್ಯ ಖಾರ್ವಿ ಎಂಬವರ ಮಗ ಸಂಜಯ (21) ಎಂದು ಗುರುತಿಸಲಾಗಿದೆ. ಮೊಬೈಲ್ ನೋಡುವ ಚಟ ಹೊಂದಿದ್ದ ಇವರಿಗೆ ತಂದೆ ಬುದ್ದಿ ಹೇಳಿದ್ದು ಇದರಿಂದ ಮನ ನೊಂದು ಅವರು ಮನೆಯ ಪಕ್ಕಾಸಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಗಂಗೊಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story