ಕಾರ್ಕಳ, ನ.20: ಹೊಸ ಮನೆಗೆ ಮಾಡಿರುವ ಸಾಲ ಪಾವತಿಸದ ಚಿಂತೆಯಲ್ಲಿ ಹಾಗೂ ಮಧ್ಯಪಾನ ಮಾಡುವ ಚಟದಿಂದ ಮಾನಸಿಕವಾಗಿ ನೊಂದ ಮಿಯಾರು ನಿವಾಸಿ ಮಂಜುನಾಥ (43) ಎಂಬವರು ನ.18ರಂದು ಮಧ್ಯಾಹ್ನ ಮಿಯಾರು ಹೊಳೆಯ ಸಮೀಪದ ಹಾಡಿಯಲ್ಲಿ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.