ಮಡಂತ್ಯಾರು: ರಾಜ್ಯ ವಕ್ಫ್ ಬೋರ್ಡ್ ನೂತನ ಅಧ್ಯಕ್ಷ ಶಾಫಿ ಸಅದಿಗೆ ಸ್ವಾಗತ
ಮಡಂತ್ಯಾರು: ಕರ್ನಾಟಕ ಸರಕಾರ ವಕ್ಫ್ ಮಂಡಳಿಗೆ ನೂತನ ಅಧ್ಯಕ್ಷರಾಗಿ ಆಯ್ಕೆಯಾದ ಕರ್ನಾಟಕ ಮುಸ್ಲಿಂ ಜಮಾಅತ್ ರಾಜ್ಯ ಪ್ರಧಾನ ಕಾರ್ಯದರ್ಶಿ ಶಾಫಿ ಸಅದಿ ಬೆಂಗಳೂರು ಹಾಗೂ ರಾಜ್ಯ ವಕ್ಫ್ ಮಂಡಳಿಯ ಸದಸ್ಯರಾದ ಯಾಕೂಬ್ ಯೂಸುಫ್ ಹೊಸನಗರ ಅವರು ನೂರುಲ್ ಹುದಾ ಜುಮಾ ಮಸೀದಿ ಮಡಂತ್ಯಾರಿಗೆ ಸೋಮವಾರ ಬೇಟಿ ನೀಡಿದರು.
ಈ ಸಂದರ್ಭ ನೂರುಲ್ ಹುದಾ ಜಮಾಅತ್ ಕಮಿಟಿ, ಸ್ಥಳೀಯ ಎಸ್ಸೆಸ್ಸೆಫ್ ಮಡಂತ್ಯಾರು ಹಾಗೂ ಪುಂಜಾಲಕಟ್ಟೆ ಶಾಖೆಯ ನಾಯಕರು ಸನ್ಮಾನಿಸಿ ಗೌರವಿಸಿದರು.
ರಾಜ್ಯ ವಕ್ಫ್ ಮಂಡಳಿಯ ಮಾಜಿ ಅಧ್ಯಕ್ಷ ಅಡ್ವೆಕೇಟ್ ರಿಯಾಝ್ ಖಾನ್ ಸಾಹೇಬ್ ಹಾಗೂ ಸ್ಥಳೀಯ ಖತೀಬ್ ಅಬ್ದುರ್ರಝಾಕ್ ಸಖಾಫಿ ಮಡಂತ್ಯಾರು ಮಾತನಾಡಿ, ನೂತನ ವಕ್ಫ್ ಮಂಡಳಿ ನಾಯಕರಿಗೆ ಶುಭ ಹಾರೈಸಿದರು. ನಂತರ ಮಾತನಾಡಿದ ಶಾಫಿ ಸಅದಿ ಬೆಂಗಳೂರು, ಅಲ್ಪ ಸಂಖ್ಯಾತ ಹಾಗೂ ಹಿಂದುಳಿದ ವರ್ಗಗಳ ಶೈಕ್ಷಣಿಕ ಹಾಗೂ ಸರ್ವತೋಮುಖ ಅಭಿವೃದ್ಧಿಯಲ್ಲಿ ಎಲ್ಲರ ಸಹಕಾರ ಅನಿವಾರ್ಯ ಎಂದರು.
ಕಾರ್ಯಕ್ರಮದಲ್ಲಿ ಸ್ವಾದಿಕ್ ಮಾಸ್ಟರ್ ಮಲೆಬೆಟ್ಟು, ಅಶ್ರಫ್ ಕಿನಾರ, ಕೆ.ಎಚ್ ಇಸ್ಮಾಯಿಲ್ ಸಅದಿ ಬೆಂಗಳೂರು, ಸಿರಾಜುದ್ದೀನ್ ಸಖಾಫಿ ಕನ್ಯಾನ, ಇಸ್ಮಾಯಿಲ್ ಮಾಸ್ಟರ್ ಮಂಗಳಪದವು, ಅಬ್ದುರ್ರಹ್ಮಾನ್ ಮೊಗರ್ಪನೆ, ರಶೀದ್ ಹಾಜಿ ವಗ್ಗ, ಮಡಂತ್ಯಾರು ಜಮಾಅತ್ ಅಧ್ಯಕ್ಷಾದ ನಝೀರ್ ಹಾಜಿ, ಜಮಾಅತ್ ಪ್ರಧಾನ ಕಾರ್ಯದರ್ಶಿ ಹಾಗೂ ನಿವೃತ್ತ ತಹಶೀಲ್ದಾರರಾದ ಅಬ್ದುರ್ರಹ್ಮಾನ್ ಸಾಹೆಬ್, ಇಸ್ಮಾಯಿಲ್ ಪರನೀರು, ಎಸ್ಸೆಸ್ಸೆಫ್ ಬೆಳ್ತಂಗಡಿ ಮಾಜಿ ಅಧ್ಯಕ್ಷ ಬಹು ನಝೀರ್ ಮದನಿ ಪುಂಜಾಲಕಟ್ಟೆ, ಎಸ್ಸೆಸ್ಸೆಫ್ ಜಿಲ್ಲಾ ಕ್ಯಾಂಪಸ್ ಕಾರ್ಯದರ್ಶಿ ರಶೀದ್ ಮಡಂತ್ಯಾರು, ಎಸ್ಸೆಸ್ಸೆಫ್ ಮಡಂತ್ಯಾರ್ ಸೆಕ್ಟರ್ ನಾಯಕ ಅಡ್ವಕೇಟ್ ಇರ್ಷಾದ್ ಸಹಿತ ಹಲವಾರು ಉಪಸ್ಥಿತರಿದ್ದರು.