ಮಟ್ಕಾ ವಿರುದ್ಧ ಕಾರ್ಯಾಚರಣೆ: ಐವರ ಬಂಧನ
ಉಡುಪಿ, ನ.27: ಮಟ್ಕಾ ಜುಗಾರಿ ಸಂಬಂಧಿಸಿ ನ.26ರಂದು ವಿವಿಧೆಡೆ ದಾಳಿ ನಡೆಸಿದ ಪೊಲೀಸರು ಒಟ್ಟು ಐದು ಮಂದಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಶಂಕರನಾರಾಯಣ ಪೊಲೀಸ್ ಠಾಣಾ ವ್ಯಾಪ್ತಿಯ ಸಿದ್ದಾಪುರ ಗ್ರಾಮದ ಜನ್ಸಾಲೆ ಬಳಿ ಆಜ್ರಿ ಕುಂದುರುಗುಂಡಿಯ ಸೀತಾರಾಮ ಕುಲಾಲ್(45), ಪಡುಬಿದ್ರಿ ಪೊಲೀಸ್ ಠಾಣಾ ವ್ಯಾಪ್ತಿಯ ಪಡುಬಿದ್ರಿ ಕೆಳಪೇಟೆ ಎಂಬಲ್ಲಿ ಮುಹಮ್ಮದ್ ರಫೀಕ್ ಮತ್ತು ಹೆಜಮಾಡಿ ಜಂಕ್ಷನ್ ಬಸ್ ನಿಲ್ದಾಣದ ಬಳಿ ಚೇತನ್ ಪೂಜಾರಿ, ಕೋಟ ಪೊಲೀಸ್ ಠಾಣಾ ವ್ಯಾಪ್ತಿಯ ತೆಕ್ಕಟ್ಟೆ ಮೀನು ಮಾರ್ಕೆಟ್ ಹತ್ತಿರದ ಕೋಟತಟ್ಟುವಿನ ಸುಮಂತ(37), ಬ್ರಹ್ಮಾವರ ಪೊಲೀಸ್ ಠಾಣಾ ವ್ಯಾಪ್ತಿಯ ಬ್ರಹ್ಮಾವರ ಆಕಾಶವಾಣಿ ಬಳಿ ಪೇತ್ರಿಯ ಆನಂದ(45) ಎಂಬವರನ್ನು ಪೊಲೀಸರು ವಶಕ್ಕೆ ಪಡೆದು ನಗದು ಸ್ವಾಧೀನ ಪಡಿಸಿಕೊಂಡಿದ್ದಾರೆ.
Next Story