ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಮಹಾಸಭೆ
ಮಂಗಳೂರು, ನ.29: ದ.ಕ.ಜಿಲ್ಲಾ ಗ್ಯಾರೇಜ್ ಮಾಲಕರ ಸಂಘದ ಮಹಾಸಭೆಯು ರವಿವಾರ ಕಡೆಮೊಗರುನಲ್ಲಿರುವ ಸಂಘದ ಸಭಾಭವನದಲ್ಲಿ ನಡೆಯಿತು.
ಅತಿಥಿಗಳಾಗಿ ಉದ್ಯಮಿಗಳಾದ ವಿನ್ಸೆಂಟ್ ಲೋಬೋ, ಪ್ರಸಾದ್ ಕಾಂಚನ್, ಸಂತೋಷ್ ರಾವ್, ರಾಜೇಶ್, ಜಿಲ್ಲಾ ಸಂಘದ ಅಧ್ಯಕ್ಷರಾದ ದಿನೇಶ್ ಕುಮಾರ್, ಸಂಘದ ಸ್ಥಾಪಕ ಕಾರ್ಯದರ್ಶಿ ಜನಾರ್ದನ ಎ. ಅತ್ತಾವರ, ಪ್ರಧಾನ ಕಾರ್ಯದರ್ಶಿ ಪುರುಷೋತ್ತಮ ಕಮಿಲ, ಕೋಶಾಧಿಕಾರಿ ರಾಜಗೋಪಾಲ್, ಹಿರಿಯ ನಿರ್ದೇಶಕರಾದ ಪುಂಡಲೀಕ ಸುವರ್ಣ, ರುಕ್ಮಯ್ಯ ಗೌಡ, ದಿವಾಕರ್ ಉಪಸ್ಥಿತರಿದ್ದರು.
ಈ ಸಂದರ್ಭ ಗಿರೀಶ್ ಕುಮಾರ್ಗೆ ಸೇವಾ ರತ್ನ ಹಾಗೂ ಮಾಜಿ ಕೋಶಾಧಿಕಾರಿ ಗೋಪಾಲ್ಗೆ ಸಮಾಜರತ್ನ ಪ್ರಶಸ್ತಿ ನೀಡಿ ಗೌರವಿಸಲಾಯಿತು. ಅಲ್ಲದೆ ವೃತ್ತಿ ಬಾಂಧವರ ಪ್ರತಿಭಾನ್ವಿತ ವಿದ್ಯಾರ್ಥಿ-ವಿದ್ಯಾರ್ಥಿನಿಯರನ್ನು ಸನ್ಮಾನಿಸಲಾಯಿತು.
Next Story