ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ
ಬಾಲಕೃಷ್ಣ ಶೆಟ್ಟಿ
ಉಡುಪಿ, ನ.29: ಸಿಪಿಐಎಂ ಉಡುಪಿ ಜಿಲ್ಲಾ ಕಾರ್ಯದರ್ಶಿಯಾಗಿ ಬಾಲಕೃಷ್ಣ ಶೆಟ್ಟಿ ಪುನರಾಯ್ಕೆಯಾಗಿದ್ದಾರೆ.
ನ.28ರಂದು ನಡೆದ ಸಿಪಿಐಎಂ ಉಡುಪಿ ಜಿಲ್ಲಾ ಸಮ್ಮೇಳನದಲ್ಲಿ ಈ ಆಯ್ಕೆ ಮಾಡಲಾಯಿತು. 15 ಸದಸ್ಯರ ಜಿಲ್ಲಾ ಸಮಿತಿ ಯೊಂದಿಗೆ 2 ಸ್ಥಾನಗಳನ್ನು ಮಹಿಳೆಯರಿಗಾಗಿ ಖಾದಿರಿಸಲಾಗಿದೆ.
ಕಾರ್ಯದರ್ಶಿ ಮಂಡಳಿ ಸದಸ್ಯರುಗಳಾಗಿ ಬಾಲಕೃಷ್ಣ ಶೆಟ್ಟಿ, ಎ.ನರಸಿಂಹ, ಸುರೇಶ ಕಲ್ಲಾಗರ, ವೆಂಕಟೇಶ ನಾಯಕ್ ಕೋಣಿ, ನಾಗರತ್ನ ನಾಡ, ಜಿಲ್ಲಾ ಸಮಿತಿ ಸದಸ್ಯರುಗಳಾಗಿ ಶಶಿಧರ, ರಾಜೀವ ಪಡುಕೋಣೆ, ಬಲ್ಕೀಸ್, ಜಿ.ಡಿ. ಪಂಜು ಪೂಜಾರಿ, ಉಮೇಶ್ ಕುಂದರ್, ಕವಿರಾಜ್, ರಾಮ ಕಾರ್ಕಡ, ರವಿ ವಿ.ಎಂ., ರಾಜು ದೇವಾಡಿಗ, ರಮೇಶ್ ಪೂಜಾರಿ ಗುಲ್ವಾಡಿ ಆಯ್ಕೆಯಾದರು.
Next Story