ಕಬಕ ಉಸ್ತಾದ್ ನೇತೃತ್ವದ 31ನೇ ಜಲಾಲಿಯತ್ ರಾತೀಬ್
ವಿಟ್ಲ : ಕಬಕ ಉಸ್ತಾದ್ ರವರ ನೇತೃತ್ವದಲ್ಲಿ ವರ್ಷಂಪ್ರತಿ ಆಚರಿಸಿಕೊಂಡು ಬರುತ್ತಿರುವ 31ನೇ ಜಲಾಲಿಯತ್ ರಾತೀಬ್ ಕೊಳ್ನಾಡು -ಬಾರೆಬೆಟ್ಟುವಿನ ನೀರಪಳಿಕೆ ಉಸ್ತಾದ್ ರವರ ನಿವಾಸದಲ್ಲಿ ರವಿವಾರ ನಡೆಯಿತು.
ಶೈಖುನಾ ಅಲ್ ಹಾಜ್ ಬಿ.ಎನ್.ಮುಹಮ್ಮದ್ ಮದನಿ (ಕಬಕ ಉಸ್ತಾದ್) ಜಲಾಲಿಯತ್ ರಾತೀಬ್ ನ ನೇತೃತ್ವ ವಹಿಸಿದ್ದರು. ಉಡುಪಿ ಸಂಯುಕ್ತ ಖಾಝಿ ಝೈನುಲ್ ಉಲಮಾ ಶೈಖುನಾ ಅಲ್ ಹಾಜ್ ಅಬ್ದುಲ್ ಹಮೀದ್ ಮುಸ್ಲಿಯಾರ್ ದು:ಹಾ ನೆರವೇರಿಸಿದರು.
ಸೈಯ್ಯದ್ ಶಿಹಾಬುದ್ದೀನ್ ತಂಙಳ್ ಮದಕ, ಸುರಿಬೈಲ್ ದಾರುಲ್ ಅಶ್ಅರಿಯ್ಯಃ ಮೆನೇಜರ್ ಮುಹಮ್ಮದ್ ಅಲಿ ಸಖಾಫಿ , ಬಾರೆಬೆಟ್ಟು ಜುಮಾ ಮಸೀದಿ ಖತೀಬ್ ಮುಹಮ್ಮದ್ ಸಹದಿ, ಕಲ್ಲೇಗ ಜುಮಾ ಮಸೀದಿ ಖತೀಬ್ ಅಬೂಬಕ್ಕರ್ ಸಿದ್ದೀಖ್ ಜಲಾಲಿ ರಾತೀಬ್ ನ ಮಹತ್ವದ ಬಗ್ಗೆ ವಿವರಿಸಿದರು.
ಇಬ್ರಾಹಿಮ್ ಮುಸ್ಲಿಯಾರ್ ಬೀಟಿಗೆ, ಅಬೂಬಕ್ಕರ್ ಸುನ್ನಿ ಪೈಝಿ ಪೆರುವಾಯಿ, ಹಾಗೂ ಹಲವಾರು ಉಲಮಾ, ಉಮರಾ ನಾಯಕರುಜಲಾಲಿಯ್ಯ ರಾತೀಬ್ ನಲ್ಲಿ ಪಾಲ್ಗೊಂಡರು.