ಕೊಣಾಜೆ: ಉಚಿತ ಫೂಟ್ ಪಲ್ಸ್ ಥೆರಪಿ ಸಮಾರೋಪ
ಮಂಗಳೂರು: ಜೆಸಿಐ ಮಂಗಳ ಗಂಗೋತ್ರಿ ಕೊಣಾಜೆ ಇದರ ಆಶ್ರಯದಲ್ಲಿ ಲಯನ್ಸ್ ಕ್ಲಬ್ ಫೋಕಸ್ ತೊಕ್ಕೊಟ್ಟು, ಗುರು ಎಜುಕೇಷನ್ ಸೆಂಟರ್, ಅಟೋ ಚಾಲಕರ ಸಂಘ,ಮೇರ್ಸಿ ಫ್ರೆಂಡ್ಸ್ ಅಸೈಗೋಳಿ,ಕಂಪಾನಿಯೊ ಮಂಗಳೂರು ಇವರ ಸಹಯೋಗದಲ್ಲಿ ಉಚಿತ ಫೂಟ್ ಪಲ್ಸ್ ಥೆರಪಿ ಶಿಬಿರದ ಸಮಾರೋಪ ಹಾಗೂ ಸೆಲ್ಯೂಟ್ ಟು ಸೈಲೆಂಟ್ ವರ್ಕರ್ ಪುರಸ್ಕಾರ ಕಾರ್ಯಕ್ರಮ ಅಸೈಗೋಳಿಯಲ್ಲಿ ಮಂಗಳವಾರ ನಡೆಯಿತು.
ಕಾರ್ಯಕ್ರಮ ದ ಅಧ್ಯಕ್ಷತೆ ವಹಿಸಿದ್ದ ಜೆಸಿಐ ಅಧ್ಯಕ್ಷ ಫ್ರಾಂಕ್ಲಿನ್ ಫ್ರಾನ್ಸಿಸ್ ಕುಟ್ಟಿನ್ಹ ಸ್ವಾಗತಿಸಿದರು.
ಈ ಸಂದರ್ಭದಲ್ಲಿ ಶ್ರೀಧರ್ ಕಪಾನಿಯಂ, ಅಲ್ಬರ್ಟ್ ಡಿ ಸೋಜ ಪಜೀರ್, ಮುಹಮ್ಮದ್ ಸಲೀಂ ಹರೇಕಳ, ವಿಶ್ವ ನಾಥ ಪೂಜಾ ರಿ ಅಸೈಗೋಳಿ ಅವರಿಗೆ ಸಲ್ಯುಟ್ ಟು ಸೈಲೆಂಟ್ ವರ್ಕರ್ ಪುರಸ್ಕಾರ ನೀಡಲಾಯಿತು.
ಕಾರ್ಯಕ್ರಮ ದಲ್ಲಿ ದೈಹಿಕ ಶಿಕ್ಷಕ ತ್ಯಾಗಂ ಹರೇಕಳ, ಶ್ರೀಧರ್, ಕಪಾನಿಯಂ ಮುಖ್ಯಸ್ಥ ಶ್ರೀಧರ್, ನಿವೃತ್ತ ಶಿಕ್ಷಕ ಆನಂದ ಕೆ ಅಸೈಗೋಳಿ, ಪ್ರಶಾಂತ್ ಡಿಸೋಜ ಅಟೋ ಚಾಲಕ ಸಂಘದ ಕಾರ್ಯದರ್ಶಿ ಪ್ರದೀಪ್ ಕುಟ್ಟಿ ನಾ , ಪವಿತ್ರ ಗಣೇಶ್ ಮತ್ತಿತರರು
ಉಪಸ್ಥಿತರಿದ್ದರು . ಪ್ರತಿಮಾ ಹೆಬ್ಬಾರ್ ನಿರೂಪಿಸಿದರು. ಜಯಲಕ್ಷ್ಮಿ ವಂದಿಸಿದರು.