ಕಾರು ಢಿಕ್ಕಿ: ಶಿರೂರು ಟೋಲ್ಗೇಟ್ ಸಿಬ್ಬಂದಿ ಮೃತ್ಯು
ಬೈಂದೂರು, ಡಿ.13: ಕಾರೊಂದು ಢಿಕ್ಕಿ ಹೊಡೆದ ಪರಿಣಾಮ ಶಿರೂರು ಟೋಲ್ಗೇಟ್ನಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದ ಭದ್ರತಾ ಸಿಬ್ಬಂದಿ ಮೃತಪಟ್ಟ ಘಟನೆ ಡಿ.13ರಂದು ನಸುಕಿನ ವೇಳೆ ನಡೆದಿದೆ.
ಮೃತರನ್ನು ರಾಘವೇಂದ್ರ ಮೇಸ್ತಾ(44) ಎಂದು ಗುರುತಿಸಲಾಗಿದೆ. ಭಟ್ಕಳ ಕಡೆಯಿಂದ ಬೈಂದೂರು ಕಡೆಗೆ ಹೋಗುತ್ತಿದ್ದ ಕಾರು, ಅತೀವೇಗ ಹಾಗೂ ಅಜಾಗರೂಕತೆಯಿಂದ ಬಂದು ಟೋಲ್ಗೇಟ್ನ ಲೇನ್ ನಂಬ್ರ 6ರಲ್ಲಿ ಕರ್ತವ್ಯ ದಲ್ಲಿದ್ದ ರಾಘವೇಂದ್ರ ಮೇಸ್ತಾಗೆ ಢಿಕ್ಕಿ ಹೊಡೆಯಿತ್ತೆನ್ನಲಾಗಿದೆ. ಇದರಿಂದ ರಾಘವೇಂದ್ರ ಮೇಸ್ತಾ, ಕಾರು ಚಾಲಕ ಸಂತೋಷ ಹಾಗೂ ಶರತ್ ಎಂಬವರು ಗಾಯಗೊಂಡರು. ಇದರಿಂದ ಗಂಭೀರವಾಗಿ ಗಾಯಗೊಂಡ ರಾಘವೇಂದ್ರ ಮೇಸ್ತಾ ಬೈಂದೂರು ಸಮುದಾಯ ಆರೋಗ್ಯಕೇಂದ್ರಕ್ಕೆ ಕರೆ ತರುವಾಗ ಮೃತಪಟ್ಟರು. ಗಾಯಗೊಂಡ ಇಬ್ಬರು ಮಣಿಪಾಲ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ಬಗ್ಗೆ ಬೈಂದೂರು ಪೊಲೀ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಸ್ಥಳೀಯರ ಪ್ರತಿಭಟನೆ: ಈ ಘಟನೆಗೆ ಟೋಲ್ಗೇಟ್ ನಿರ್ವಹಣೆ ಮಾಡುತ್ತಿರುವವರ ನಿರ್ಲಕ್ಷ್ಯವೇ ಕಾರಣ ಎಂದು ಆರೋಪಿಸಿ ಟೋಲ್ ಸಿಬ್ಬಂದಿ ಹಾಗೂ ಸ್ಥಳೀಯರು ಟೋಲ್ಗೇಟ್ ಬಳಿ ಪ್ರತಿಭಟನೆ ನಡೆಸಿದರು.
ಟೋಲ್ ಸಿಬ್ಬಂದಿ ಮೃತಪಟ್ಟ ನಂತರವೂ ಅಧಿಕಾರಿಗಳು ಸ್ಥಳಕ್ಕೆ ಆಗಮಿಸಿಲ್ಲ ಎಂದು ಆರೋಪಿಸಿದ ಪ್ರತಿಭಟನನಿರತರು, ಮೃತ ರಾಘವೇಂದ್ರ ಮೇಸ್ತನ ಕುಟುಂಬಕ್ಕೆ 5 ಲಕ್ಷ ರೂ. ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.