ಚಿನ್ನಾಭರಣ ಕಳವು: ದೂರು
ಕುಂದಾಪುರ, ಜ.5: ಮನೆಯಲ್ಲಿದ್ದ ಚಿನ್ನಾಭರಣ ಕಳವು ಮಾಡಿರುವ ಘಟನೆ ಕೊರ್ಗಿ ಗ್ರಾಮದ ಕೊರವಡಿಮನೆ ಎಂಬಲ್ಲಿ ನಡೆದಿದೆ.
ಭವಾನಿ ಶೆಡ್ತಿ ಎಂಬವರ ಮನೆಯಲ್ಲಿ ಸುಮಾರು 2 ತಿಂಗಳಿನಿಂದ ಮನೆ ಕೆಲಸ ಮಾಡಿಕೊಂಡಿದ್ದ ಶಾಂತ ಕುಮಾರಿ ಎಂಬಾಕೆಯು ಕಪಾಟಿನ ಕೀ ಬಳಸಿ ಗೋದ್ರೆಜ್ ಕಪಾಟಿನಲ್ಲಿಟ್ಟಿದ್ದ 6 ಚಿನ್ನದ ಬಳೆಗಳು ಮತ್ತು ಒಂದು ಚಿನ್ನದ ಸರ ವನ್ನು ಕಳವು ಮಾಡಿದ್ದು, ಬಳಿಕ ವಂಚಿಸುವ ಉದ್ದೇಶದಿಂದ ಕಳವು ಮಾಡಿದ ಆಭರಣ ಮಾದರಿಯ ನಕಲಿ ಆಭರಣಗಳನ್ನು ಅದೇ ಸ್ಥಳದಲ್ಲಿ ಇಟ್ಟು ಮೋಸ ಮಾಡಿರುವುದಾಗಿ ದೂರಲಾಗಿದೆ.
ಈ ಬಗ್ಗೆ ಕುಂದಾಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story