ಕೋಟ: ದನದ ಹಟ್ಟಿಯ ನೀರಿನ ಹೊಂಡಕ್ಕೆ ಬಿದ್ದು ಮಗು ಮೃತ್ಯು
ಕೋಟ, ಜ.4: ಮಗುವೊಂದು ದನದ ಹಟ್ಟಿಯ ನೀರಿನ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಮೃತಪಟ್ಟ ಘಟನೆ ಮಂಗಳವಾರ ಸಂಜೆ ವೇಳೆ ಮೊಳಹಳ್ಳಿಯ ಕೈಲ್ಕೇರಿ ಮಾವಿನಕಟ್ಟೆ ಎಂಬಲ್ಲಿ ನಡೆದಿದೆ.
ಬಿಹಾರ ಮೂಲದ ಲಾಲ್ ಬಿಹಾರಿ ಹಾಗೂ ರಾಮ್ ದೇಹನ್ ಸಿಂಗ್ ದಂಪತಿ ಮಗು ಎರಡೂವರೆ ವರ್ಷ ಪ್ರಾಯದ ಅನುರಾಜ್ ಮೃತ ದುರ್ದೈವಿ. ಈ ಕುಟುಂಬ ಮಾವಿನಕಟ್ಟೆಯ ಚೈತ್ರ ವಿ.ಅಡಪ ಎಂಬವರ ಮನೆಯಲ್ಲಿ ಹೈನು ಗಾರಿಕೆ ಕೆಲಸ ಮಾಡಿಕೊಂಡಿದ್ದರು. ಆಟ ಆಡುತ್ತಿದ್ದ ಮಗು ನೀರು ತುಂಬಿದ್ದ ಹಟ್ಟಿ ಹೊಂಡದಲ್ಲಿ ಆಕಸ್ಮಿಕವಾಗಿ ಬಿದ್ದು ಉಸಿರುಗಟ್ಟಿ ಮೃತಪಟ್ಟಿದೆ ಎಂದು ತಿಳಿದು ಬಂದಿದೆ.
ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story