ಹೊಳೆಗೆ ಬಿದ್ದು ಕೃಷಿಕ ಮೃತ್ಯು
ಹೆಬ್ರಿ, ಜ.12: ಕೃಷಿಕರೊಬ್ಬರು ಅಕಸ್ಮಿಕವಾಗಿ ಹೆಬ್ರಿ ಗ್ರಾಮದ ಏಳಾಳಿ ಎಂಬಲ್ಲಿ ಇರುವ ಡ್ಯಾಂನ ಹೊಳೆಗೆ ಬಿದ್ದು ಮೃತಪಟ್ಟಿರುವ ಘಟನೆ ಜ.11ರಂದು ಮಧ್ಯಾಹ್ನ ವೇಳೆ ನಡೆದಿದೆ.
ಮೃತರನ್ನು ಏಳಾಳಿ ನಿವಾಸಿ ಮಹಾಬಲ ಪೂಜಾರಿ (60) ಎಂದು ಗುರುತಿಸಲಾಗಿದೆ. ಹೊಳೆಯ ಮಧ್ಯದಲ್ಲಿರುವ ಕಲ್ಲಿನ ಬಂಡೆಯ ಮೇಲೆ ನಿಂತು ಸ್ನಾನ ಮಾಡುತ್ತಿದ್ದ ಇವರು, ಕಾಲು ಜಾರಿ ಅಕಸ್ಮಿಕವಾಗಿ ನೀರಿಗೆ ಬಿದ್ದು ಮುಳುಗಿ ಮೃತಪಟ್ಟಿದ್ದಾರೆ. ಈ ಬಗ್ಗೆ ಹೆಬ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story