ತೋಡಿನ ನೀರಿಗೆ ಬಿದ್ದು ಮೃತ್ಯು
ಕಾರ್ಕಳ, ನ.16: ತೋಡಿನ ನೀರಿಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟ ಘಟನೆ ಜ.15ರಂದು ಬೆಳಗ್ಗೆ ಪಳ್ಳಿ ಗ್ರಾಮದ ಬಂಡಶಾಲೆ ಎಂಬಲ್ಲಿ ನಡೆದಿದೆ.
ಮೃತರನ್ನು ಪಳ್ಳಿ ಬಂದಲ್ಪಾಡಿ ನಿವಾಸಿ ಉಮೇಶ(50) ಎಂದು ಗುರುತಿಸ ಲಾಗಿದೆ. ಬಂಡಶಾಲೆ ವಿಶ್ವರಾಜ ಹೆಗ್ಗೆಡೆ ಎಂಬವರ ತೋಟದಲ್ಲಿ ಕೆಲಸ ಮಾಡು ತ್ತಿದ್ದ ಇವರು, ಶೌಚಕ್ಕೆಂದು ಹೋಗಿದ್ದರು. ಅಲ್ಲಿ ಅವರು ಫೀಟ್ಸ್ ಕಾಯಿಲೆಯಿಂದ ತೋಡಿನ ನೀರಿಗೆ ಬಿದ್ದು ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story