'ಲಸಿಕೆ ಹಾಕದ ಯಾವುದೇ ವಿದ್ಯಾರ್ಥಿಗೆ ಕಾಲೇಜು ಪ್ರವೇಶ ನಿರಾಕರಿಸಿಲ್ಲ'
ಮಂಗಳೂರು: ಇಲಾಖೆಯ ಸೂಚನೆಯಂತೆ ವಿದ್ಯಾರ್ಥಿಯು ಲಸಿಕೆಯನ್ನು ಸ್ವ ಇಚ್ಛೆ ಯಿಂದ ಪಡೆಯಲು ಸೂಚಿಸಲಾಗಿತ್ತು ಹಾಗೂ ಹೆತ್ತವರ ಅನುಮತಿಯನ್ನು ಕೂಡಾ ಪಡೆಯಲಾಗಿತ್ತು. ಆ ಪ್ರಕಾರ ಹೆಚ್ಚಿನ ವಿದ್ಯಾರ್ಥಿ ಗಳು ಲಸಿಕೆ ಹಾಕಿಸಿಕೊಂಡಿದ್ದರು.
ಕಾಲೇಜಿಗೆ ಗೈರು ಹಾಜರಾದವರು ಕೂಡಾ ಆದಷ್ಟು ಬೇಗನೇ ಲಸಿಕೆ ಹಾಕಿಸಿಕೊಳ್ಳಿ ಎಂದು ತಿಳಿಸಲಾಗಿದೆಯೇ ಹೊರತು,ಲಸಿಕೆ ಇಲ್ಲದವರಿಗೆ ಪ್ರವೇಶ ಇಲ್ಲ ಎಂದು ಯಾರಿಗೂ ತಿಳಿಸಿಲ್ಲ. ಯಾರಿಗಾದರೂ ಲಸಿಕೆ ಪಡೆಯಲು ಇಚ್ಛೆ ಇಲ್ಲದಿದ್ದರೆ, ಸಕಾರಣ ಬರೆದು ಕೊಡಲು ಸೂಚಿಸಿದೆ ಹೊರತು ಬೇರೆ ಯಾವುದೇ ಸೂಚನೆ ನೀಡಿಲ್ಲ ಎಂದು ಗಣಪತಿ ಪ.ಪೂ ಕಾಲೇಜು ಮಂಗಳೂರು ಇದರ ಪ್ರಾಂಶುಪಾಲರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
Next Story