ಜ. 21: ಯುನಿವೆಫ್ ವತಿಯಿಂದ ಕುರ್ ಆನ್ ಅಭಿಯಾನದ ಉದ್ಘಾಟನೆ
ಮಂಗಳೂರು : ಯುನಿವೆಫ್ ಕರ್ನಾಟಕ ಜನವರಿ 21ರಿಂದ ಫೆಬ್ರವರಿ 11ರ ತನಕ "ಓದಿರಿ ಸೃಷ್ಟಿಕರ್ತನ ಸಂದೇಶವನ್ನು" ಎಂಬ ಕೇಂದ್ರಿಯ ವಿಷಯದಲ್ಲಿ ಹಮ್ಮಿಕೊಂಡಿರುವ ಕುರ್ ಆನ್ ಪ್ರಚಾರ ಅಭಿಯಾನದ ಉದ್ಘಾಟನಾ ಸಮಾರಂಭವು ಜನವರಿ 21 ರ ಸಂಜೆ 6.45 ಕ್ಕೆ ಕಂಕನಾಡಿ ಜಮೀಅತುಲ್ ಫಲಾಹ್ ಹಾಲ್ ನಲ್ಲಿ ಜರಗಲಿದೆ.
ಕುದ್ರೋಳಿ ಜಾಮಿಯಾ ಮಸೀದಿಯ ಇಮಾಮ್ ಮೌಲಾನಾ ಸಫೀಉಲ್ಲಾ ಸಿದ್ದೀಕಿ ನದ್ವಿ ಉದ್ಘಾಟನೆಯನ್ನು ನೆರವೇರಿಸಲಿರುವರು. ಯುನಿವೆಫ್ ಅಧ್ಯಕ್ಷ ರಫೀಉದ್ದೀನ್ ಕುದ್ರೋಳಿ ಅಧ್ಯಕ್ಷತೆ ವಹಿಸಲಿರುವರು ಎಂದು ಪ್ರಕಟಣೆ ತಿಳಿಸಿದೆ.
Next Story