ಕೆ.ಸಿ.ಎಫ್ ಬಹರೈನ್ ನೂತನ ಕೇಂದ್ರ ಕಚೇರಿ ಉದ್ಘಾಟನೆ
ಬಹರೈನ್: ಸಂಘಟನಾ ಕಾರ್ಯಚಟುಟಿಕೆಗಳನ್ನು ಇನ್ನಷ್ಟು ಸಕ್ರಿಯಗೊಳಿಸುವ ನಿಟ್ಟಿನಲ್ಲಿ ಗುದೈಬಿಯ ಬಲೂಚಿ ಮಸೀದಿಯ ಸನಿಹದಲ್ಲಿರುವ ಸುಸಜ್ಜಿತವಾದ ಕೆ.ಸಿ.ಎಫ್ ಬಹರೈನ್ ನೂತನ ಕೇಂದ್ರ ಕಚೇರಿಯನ್ನು ಅಲ್ ಖಾದಿಸ ಚೇರ್ಮ್ಯಾನ್ ಕಾವಲ್ ಕಟ್ಟೆ ಹಝ್ರತ್ ನೆರವೇರಿಸಿದರು.
ಸಮಾರಂಭದ ಅಧ್ಯಕ್ಷತೆಯನ್ನು ರಾಷ್ಟ್ರೀಯ ಸಮಿತಿಯ ಅಧ್ಯಕ್ಷರಾದ ವಿಟ್ಟಲ್ ಜಮಾಲುದ್ದೀನ್ ರವರು ವಹಿಸಿದ್ದರು.
ಕಾರ್ಯಕ್ರಮದ ಭಾಗವಾಗಿ ಜಲಾಲಿಯ ರಾತೀಬ್ ಮತ್ತು ಕೆಸಿಎಫ್ ಬಹರೈನ್ ವತಿಯಿಂದ ವಾರಕ್ಕೊಮ್ಮೆ ನಡೆಯುವ ಸ್ವಲಾತ್ ಮಜ್ಲಿಸ್ ಹಾಗೂ ಬರಾಅತ್ ದಿನದ ಪ್ರಯುಕ್ತ ದುಃಆ ಸಂಗಮವು ನಡೆಯಿತು.
ಕಾರ್ಯಕ್ರಮದಲ್ಲಿ ಕೆಸಿಎಫ್ ಐಎನ್ಸಿ ಸಾಂತ್ವನ ಅಧ್ಯಕ್ಷರಾದ ಅಲಿ ಮುಸ್ಲಿಯಾರ್, ಕೆಎಂಸಿಸಿ ಬಹರೈನ್ ಉಪಾಧ್ಯಕ್ಷ ಶಾಫಿ ಪಾರಕಟ್ಟ, ಕಲಂದರ್ ರಝ್ವಿ ಕಾವಲ್ಕಟ್ಟೆ, ರಾಷ್ಟ್ರೀಯ ಸಮಿತಿಯ, ಝೋನ್ ಸೆಕ್ಟರ್ ಗಳ ನಾಯಕರುಗಳು ಹಾಗೂ ವಿವಿಧ ಸಂಘ ಸಂಸ್ಥೆಗಳ ನೇತಾರರು ಉಪಸ್ಥಿತರಿದ್ದರು.
ಕೆ.ಸಿ.ಎಫ್ ಬಹರೈನ್ ರಾಷ್ಟ್ರೀಯ ಸಮಿತಿ ಪ್ರಧಾನ ಕಾರ್ಯದರ್ಶಿ ಹಾರಿಸ್ ಸಂಪ್ಯ ಸ್ವಾಗತಿಸಿ, ಪ್ರಕಾಶನ ಅಧ್ಯಕ್ಷರಾದ ಲತೀಫ್ ಪೇರೋಲಿ ವಂದಿಸಿದರು.