ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ವತಿಯಿಂದ ಮುಸ್ತಫಾ ಅಬ್ದುಲ್ಲಾ ಉಳ್ಳಾಲರಿಗೆ ಸನ್ಮಾನ
ದುಬೈ: ಉಳ್ಳಾಲ ಸೈಯ್ಯದ್ ಮದನಿ ದರ್ಗಾ ಸಮಿತಿ ಸದಸ್ಯರಾದ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಯುಎಇಗೆ ಆಗಮಿಸಿದ್ದು, ಅವರನ್ನು ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ರಾಜ್ಯ ಸಮಿತಿ ವತಿಯಿಂದ ಶುಕ್ರವಾರ ರಾತ್ರಿ ದುಬೈ ಟೀಫೀ ಹೋಟೆಲ್ ನಲ್ಲಿ ಸನ್ಮಾನಿಲಾಯಿತು.
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ರಾಜ್ಯ ಸಮಿತಿ ಅಧ್ಯಕ್ಷ ಸಯ್ಯದ್ ಅಸ್ಕರ್ ಅಲೀ ತಂಙಲ್ ಅಧ್ಯಕ್ಷತೆಯಲ್ಲಿ ನಡೆದ ಸನ್ಮಾನ ಕಾರ್ಯಕ್ರಮದಲ್ಲಿ ಟ್ರೆಂಡ್ ಚಯರ್ ಮ್ಯಾನ್ ನೂರ್ ಮುಹಮ್ಮದ್ ನೀರ್ಕಜೆ ಸ್ವಾಗತಿಸಿದರು.
ಎಸ್ಕೆಎಸ್ಸೆಸ್ಸೆಫ್ ಕರ್ನಾಟಕ ಯುಎಇ ರಾಜ್ಯ ಸಮಿತಿ ಪ್ರಧಾನ ಕಾರ್ಯದರ್ಶಿ ಸುಲೈಮಾನ್ ಮೌಲವಿ ಕಲ್ಲೆಗ ಮಾತನಾಡಿ, ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರು ಸಾಮಾಜಿಕ ದೂರದೃಷ್ಟಿ ಮತ್ತು ಜವಾಬ್ದಾರಿಯನ್ನು ಮೈಗೂಡಿಸಿಕೊಂಡು ಸಮಾಜದಲ್ಲಿ ಗುರುತಿಸಿದ್ದಾರೆ. ಅವರ ನೇತೃತ್ವದ ಸಾಮಾಜಿಕ ಸೇವೆಗಳು ಮತ್ತು ಮುಸ್ಲಿಮರ ವಿದ್ಯಾಭ್ಯಾಸಕ್ಕೆ ಮುತುವರ್ಜಿ ವಹಿಸಿ ನಡೆಯುವ ಕೆಲಸ ಕಾರ್ಯಗಳು ಪ್ರಶಂಸನೀಯವಾದುದು, ಇನ್ನಷ್ಟು ಸಾಮಾಜಿಕ ಕೆಲಸಗಳೊಂದಿಗೆ ಮುಂದೆ ಸಾಗಲು ಸರ್ವಶಕ್ತನು ಅನುಗ್ರಹಿಸಲಿ ಎಂದು ಪ್ರಾರ್ಥಿಸಿ ಶುಭಹಾರೈಸಿದರು.
ಸನ್ಮಾನ ಸ್ವೀಕರಿಸಿದ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಮಾತನಾಡಿ, ನಮ್ಮ ಕೆಲಸ ಕಾರ್ಯಗಳು ಸಮುದಾಯದ ಧಾರ್ಮಿಕ, ಲೌಕಿಕ ಶಿಕ್ಷಣ ಮತ್ತು ಸಾಮಾಜಿಕ ಸುಧಾರಣೆಗಾಗಿ ಎಂದು ಹೇಳಿದರು. ಸಮಸ್ತ ಉಲೆಮಾಗಳ ಜೀವನ ಚರ್ಯೆ ಅನುಸರಿಸಬೇಕು ಅದು ನಮ್ಮ ಮಕ್ಕಳಿಗೆ ಪರಿಚಯಿಸುವ ಕೆಲಸ ನಮ್ಮಿಂದ ಆಗಬೇಕಾಗಿದೆ ಎಂದರು.
ಸಭೆಯಲ್ಲಿ ಅಸ್ಕರ್ ಅಲೀ ತಂಙಲ್ ಅವರು ಮಾತನಾಡಿ ಮುಸ್ತಫಾ ಅಬ್ದುಲ್ಲಾ ಉಳ್ಳಾಲ ಅವರ ಸಾಮಾಜಿಕ ಸೇವೆಯನ್ನು ಪ್ರಶಂಸಿಸಿ ಶುಭ ಹಾರೈಸಿದರು.
ಈ ಸಂದರ್ಭ ಫರ್ವಿಝ್ ಗೂಡಿನಬಲಿ, ಸಮಿತಿಯ ಪದಾಧಿಕಾರಿಗಳಾದ ಅಬ್ದುಲ್ ಸಲಾಂ ಬಪ್ಪಲಿಗೆ, ನವಾಝ್ ಬಿ ಸಿ ರೋಡ್, ನಾಸಿರ್ ಬಪ್ಪಲಿಗೆ, ಸಿರಾಜ್ ಬಿ ಸಿ ರೋಡ್, ಅಝೀಝ್ ಸೋಂಪಾಡಿ, ಅಝರ್ ಹಂಡೇಲು, ಜಾಬಿರ್ ಬೆಟ್ಟಂಪಾಡಿ, ಜಾಬಿರ್ ಬಪ್ಪಲಿಗೆ, ಇಶಾಕ್ ಕುಡ್ತಮುಗೇರು ಮೊದಲಾದವರು ಭಾಗವಹಿಸಿದ್ದರು.