ಹಳಗೇರಿ : ಕ್ರಿಕೆಟ್ ಪಂದ್ಯಾಟ; ಲಿಜೆಂಡ್ ರಿಟರ್ನ್ಸ್ ತಂಡ ಚಾಂಪಿಯನ್
ಹಳಗೇರಿ : ಸನ್ ರೈಸ್ ಕ್ರಿಕೆಟರ್ಸ್ ಮತ್ತು ಹಳಗೇರಿ ಫ್ರೆಂಡ್ಸ್ ಇವರ ಜಂಟಿ ಆಶ್ರಯದಲ್ಲಿ ಪ್ರತಾಪ್ ಶೆಟ್ಟಿ ಹಳಗೇರಿ ನೇತೃತ್ವದಲ್ಲಿ ಸತತ ನಾಲ್ಕನೇ ಬಾರಿಗೆ ಕ್ರಿಕೆಟ್ ಪಂದ್ಯಾಟವನ್ನು ಹಮ್ಮಿಕೊಳ್ಳಲಾಯಿತು.
ಸಾಮಾನ್ಯವಾಗಿ ಕ್ರೀಡಾಪಟುಗಳ ಪಂದ್ಯಾಟದ ಜೊತೆಗೆ 14 ವರ್ಷದೊಳಗಿನ ಪುಟ್ಟ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನುತೋರ್ಪಡಿಸುವ ಅವಕಾಶ, 40 ವರ್ಷ ಮೇಲ್ಪಟ್ಟ ಹಿರಿಯರಿಗೆ ಪಂದ್ಯಾಟವನ್ನು ಆಯೋಜಿಸಿ ತಮ್ಮ ಯೌವನವನ್ನು ನೆನಪಿಸುವ ವೇದಿಕೆ, ಬಡ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಮತ್ತು ಸಾಧಕರಿಗೆ ಸನ್ಮಾನ, ಉತ್ತರ ಪ್ರದೇಶದ ಆಟಗಾರರು ಹಳಗೇರಿಯಲ್ಲಿ ಆಡಿದ ಅನುಭವ ಹಾಗೂ ಗ್ರಾಮಸ್ಥರೆಲ್ಲರಿಗೂ ಮನೋರಂಜನಾ ಕಾರ್ಯಕ್ರಮದ ಅಂಗವಾಗಿ ಮೂರು ಮುತ್ತು ಖ್ಯಾತಿಯ ಮದುಮಗ-3 ನಾಟಕವನ್ನು ಆಯೋಜಿಸಲಾಗಿತ್ತು.
ಉದ್ಘಾಟನಾ ಕಾರ್ಯಕ್ರಮದಲ್ಲಿ ಬೈಂದೂರು ಪೊಲೀಸ್ ಠಾಣೆಯ ಉಪ ನಿರೀಕ್ಷಕರು ಪವನ್ ನಾಯಕ್, ಮುಖ್ಯ ಅತಿಥಿಗಳಾಗಿ ಕಂಬದಕೋಣೆ ಗ್ರಾಮ ಪಂಚಾಯತ್ ಸದಸ್ಯ ಸುಬ್ರಮಣ್ಯ ಜೋಗಿ, ಬೆನಕ ಗ್ರೂಪ್ಸ್ ಮಾಲಕ ನಾಗೇಶ್ ಜೋಗಿ, ಹಳಗೇರಿ ಮಸೀದಿಯ ಮೌಲಾನ ಹಸೀನುಲ್ ಹಕ್ ಖಾಸಿಮಿ, ಇಶಾ ಟೈಲ್ಸ್ ಮಾಲಕ ಉದಯ್ ಶ್ರೀಯಾನ್ ಮತ್ತುಮಾಜಿ ಕಂಬದಕೋಣೆ ಗ್ರಾಮ ಪಂಚಾಯತ್ ಸದಸ್ಯ ರವೀಂದ್ರ ಶೆಟ್ಟಿ ಮಕ್ಕಿಮನೆ ಉಪಸ್ಥಿತರಿದ್ದರು.
ಕ್ರೀಡಾಕೂಟದ ಮೊದಲ ಸ್ಥಾನವನ್ನು ಶಿವರಾಜ್ ಶೆಟ್ಟಿ ಹಳಗೇರಿ ಮಾಲಕತ್ವದ ಲಿಜೆಂಡ್ ರಿಟರ್ನ್ಸ್ ತಂಡ, ರನ್ನರ್ಸ್ ಆಗಿ ಬ್ರಹ್ಮಶ್ರೀ ಉಳ್ಳೂರು ತಂಡ, ತೃತೀಯ ಸ್ಥಾನವನ್ನು ಉತ್ಸವಿ ನಾಗೂರು ಪಡೆದುಕೊಂಡರು.
ಪಂದ್ಯ ಶ್ರೇಷ್ಟ ಪ್ರಶಸ್ತಿಯನ್ನು ಲಿಜೆಂಡ್ ರಿಟರ್ನ್ಸ್ ತಂಡದ ರೋಹಿತ್, ಶ್ರೇಷ್ಠ ದಾಂಡುಗಾರ ಬ್ರಹ್ಮಶ್ರೀ ಉಳ್ಳೂರಿನ ಗುರು, ಶ್ರೇಷ್ಠ ಎಸೆತಗಾರ ಲಿಜೆಂಡ್ ರಿಟರ್ನ್ಸ್ ತಂಡದ ನಿತೀಶ್, ಸರಣಿ ಶ್ರೇಷ್ಠ ಲಿಜೆಂಡ್ ರಿಟರ್ನ್ಸ್ ತಂಡದ ಲೋಕೇಶ್ ಆಚಾರ್ಯ ಪಡೆದರು.
ಸಮಾರೋಪ ಕಾರ್ಯಕ್ರಮದಲ್ಲಿ ಉದ್ಘಾಟಕರಾಗಿ ಬಿಜೆಪಿ ಮಂಡಲ ಅಧ್ಯಕ್ಷರಾದ ದೀಪಕ್ ಕುಮಾರ್ ಶೆಟ್ಟಿ ನೆಲ್ಯಾಡಿ, ಮುಖ್ಯ ಅತಿಥಿಗಳಾಗಿ ಝೈನುಲ್ ಅಬಿದಿನ್ ಹಳಗೇರಿ, ಬಿ ಆರ್ ಗ್ರೂಪ್ಸ್ ಮಾಲಕ ರಾಘವೇಂದ್ರ ಶೆಟ್ಟಿ ಮತ್ತು ಹೇರೂರು ಗ್ರಾಮ ಪಂಚಾಯತ್ ಸದಸ್ಯರಾದ ಸತೀಶ್ ಕುಮಾರ್ ಶೆಟ್ಟಿ ಉಪ್ರಳ್ಳಿ, ಕಂಬದಕೋಣೆ ರೈತ ಸಹಕಾರಿ ಸಂಘದ ಅಧ್ಯಕ್ಷ ಕೆ. ಪ್ರಕಾಶ್ಚಂದ್ರ ಶೆಟ್ಟಿ ಉಪಸ್ಥಿತರಿದ್ದರು.
ವೇದಿಕೆಯಲ್ಲಿ ಕಂಬದಕೋಣೆ ಗ್ರಾಮ ಪಂಚಾಯತ್ ಅಧ್ಯಕ್ಷರಾದ ಸುಕೇಶ್ ಶೆಟ್ಟಿ, ಬೆಂಗಳೂರು ಪರಪ್ಪನ ಅಗ್ರಹಾರದ ನಿವೃತ್ತ ಜೈಲರ್ ಮುತ್ತ ಬಿ ಹಳಗೇರಿ ಮತ್ತು ಮಾಜಿಮರವಂತೆ ತಾಲೂಕು ಪಂಚಾಯತ್ ಸದಸ್ಯ ಜಗದೀಶ್ ಪೂಜಾರಿ ಹಕ್ಕಾಡಿ ಇವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮವನ್ನು ಸುರೇಶ ವಿ ಬಿ ಹಳಗೇರಿ ನಿರೂಪಿಸಿದರು, ಸಮಿ ಹಳಗೇರಿ ಪ್ರಾಸ್ತಾವಿಕ ಮಾತನ್ನಾಡಿ ಅತಿಥಿಗಳನ್ನು ಸ್ವಾಗತಿಸಿದರು ಮತ್ತು ಪ್ರತಾಪ್ ಶೆಟ್ಟಿ ಹಳಗೇರಿ ವಂದಿಸಿದರು.