ಭಟ್ಕಳ: ಕ್ಷುಲ್ಲಕ ಕಾರಣಕ್ಕೆ ಚೂರಿ ಇರಿತ; ಇಬ್ಬರಿಗೆ ಗಾಯ
ಭಟ್ಕಳ: ಕ್ಷುಲ್ಲಕ ಕಾರಣಕ್ಕಾಗಿ ವ್ಯಕ್ತಿಯೊಬ್ಬ ತನ್ನ ಪರಿಚಿತನ ಮೇಲೆ ಚೂರಿಯಿಂದ ದಾಳಿ ಮಾಡಿದ ಘಟನೆ ಮಂಗಳವಾರ ರಾತ್ರಿ ಇಲ್ಲಿನ ಅಂಜುಮನ್ ಕಾಲೇಜ್ ರಸ್ತೆಯಲ್ಲಿ ನಡೆದಿದೆ.
ಗಾಯಗೊಂಡವರನ್ನು ನಗರದ ಕೋಟೇಶ್ವರ ರಸ್ತೆ ನಿವಾಸಿ ಕಿರಣ್ ಕುಮಾರ್ ಕೊರಾರ್(26) ಎಂದು ಗುರುತಿಲಾಗಿದ್ದು, ಹಲ್ಲೆಯನ್ನು ತಪ್ಪಿಸಲು ಮುಂದಾದ ಕಿರಣ್ ನ ಸಹೋದರ ಅರುಣ್ ಕುಮಾರ್(28) ಎನ್ನುವವರಿಗೂ ಗಾಯವಾಗಿದ್ದು ಇಬ್ಬರನ್ನೂ ಇಲ್ಲಿನ ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಲಾಗಿದೆ.
ಚೂರಿಯಿಂದ ದಾಳಿ ಮಾಡಿದ ಆರೋಪಿಯನ್ನು ಕೋಟೇಶ್ವರ ರಸ್ತೆಯ ಕುಮಾರ್ ಮಾರಿ ಎಂದು ಗುರುತಿಸಲಾಗಿದ್ದು ಈತ ಪರಾರಿಯಾಗಿದ್ದಾನೆ ಎಂದು ತಿಳಿದುಬಂದಿದೆ.
ಮಾಹಿತಿ ಪಡೆದ ನಗರ ಠಾಣಾ ಪಿ.ಎಸ್.ಐ ಸುಮಾ ಬಿ. ಘಟನಾ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದು ಪ್ರಕರಣ ದಾಖಲಿಸಿಕೊಂಡಿದ್ದಾರೆ.
Next Story