ಚಾರ್ಮಾಡಿ ಘಾಟಿಯ 2ನೇ ತಿರುವು ಬಳಿ ರಸ್ತೆಯಲ್ಲಿ ಬಿರುಕು
ಬೆಳ್ತಂಗಡಿ, ಜು.18: ಚಾರ್ಮಾಡಿ ಘಾಟಿಯ ಎರಡನೇ ತಿರುವಿನ ಬಳಿ ರಸ್ತೆಯಲ್ಲಿ ಮೋರಿಯಿರುವಲ್ಲಿ ರಸ್ತೆ ಬಿರುಕುಬಿಟ್ಟಿದೆ. ಆದರೆ ಸದ್ಯ ವಾಹನಗಳ ಸಂಚಾರಕ್ಕೆ ಯಾವುದೇ ಸಮಸ್ಯೆಯುಂಟಾಗಿಲ್ಲ ಎಂದು ತಿಳಿದುಬಂದಿದೆ.
ಬಿರುಕು ಬಿಟ್ಟ ಪ್ರದೇಶದಲ್ಲಿ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬ್ಯಾರಿಕೇಡ್ ಅಳವಡಿಸಿ, ಚರಲ್ ಹಾಕಿ ಮುಂಜಾಗ್ರತಾ ಕ್ರಮ ಕೈಗೊಂಡಿದ್ದಾರೆ.
ಕುಸಿತ ಸಂಭವಿಸಿರುವ ಇನ್ನೊಂದು ಭಾಗದಲ್ಲಿ ಕಂದಕ ಇರುವ ಕಾರಣ ಅಪಾಯದ ಸ್ಥಿತಿಯಿದೆ. ಬಸ್, ಲಾರಿ ಮೊದಲಾದ ಘನ ವಾಹನಗಳು ಸಂಚರಿಸುವಾಗ ಅಪಾಯವುಂಟಾಗುವ ಸಾಧ್ಯತೆಯಿದೆ.
Next Story