ಪಡುಬಿದ್ರೆ: ಎರಡು ಕಡೆ ಅಗ್ನಿ ಅನಾಹುತ
ಪಡುಬಿದ್ರೆ: ಪಡುಬಿದ್ರೆಯಲ್ಲಿ ಬುಧವಾರ ಬೆಳಗ್ಗೆ ಎರಡು ಕಡೆ ಬೆಂಕಿ ಅವಘಡ ಸಂಭವಿಸಿದೆ.
ಪಡುಬಿದ್ರೆ: ಇಲ್ಲಿನ ಬೀಡು ಸುಶೀಲಾ ಗಾಣಿಗ ಎಂಬವರಿಗೆ ಸೇರಿದ ಎಣ್ಣೆ ಮತ್ತು ಹಿಟ್ಟಿನ ಗಿರಣಿಯ ಹಿಂಭಾಗದಲ್ಲಿರುವ ಗೋದಾಮಿನಲ್ಲಿ ಆಕಸ್ಮಿಕ ಬೆಂಕಿ ಸಂಭವಿಸಿದೆ.
ಬೆಂಕಿ ಅವಘಡದಿಂದ ಗೋದಾಮಿನಲ್ಲಿದ್ದ ತೆಂಗಿನ ಕಾಯಿಗಳು ಸುಟ್ಟು ಕರಕಲಾಗಿವೆ. ಹೆಜಮಾಡಿ ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಪ್ರಾಣೇಶ್ ಸಹಿತ ಸ್ಥಳೀಯರು ಹಾಗೂ ಅಗ್ನಿ ಶಾಮಕ ದಳ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸಿದ್ದಾರೆ.
ಪಡುಬಿದ್ರೆಯ ಪಂಚಾಯತ್ ಕಟ್ಟಡದಲ್ಲಿರುವ ದಿನೇಶ್ ಎಂಬವರಿಗೆ ಸೇರಿದ ಅವಿಘ್ನ ಅಕ್ವೇರಿಯಂನಲ್ಲಿ ಬೆಂಕಿ ಉಂಟಾಗಿದೆ. ಬೆಂಕಿ ಅವಘಡದಿಂದ ಅಂಗಡಿಯ ಸಾಮಗ್ರಿಗಳು ಬೆಂಕಿಗೆ ಆಹುತಿಯಾಗಿವೆ. ಶಾರ್ಟ್ ಸರ್ಕ್ಯೂಟ್ನಿಂದ ಬೆಂಕಿ ಉಂಟಾಗಿರಬಹುದು ಎಂದು ಶಂಕಿಸಲಾಗಿದೆ. ಅಗ್ನಿ ಶಾಮಕದಳದ ಸಿಬ್ಬಂದಿ ಸ್ಥಳಕ್ಕೆ ಆಗಮಿಸಿ ಬೆಂಕಿ ನಂದಿಸುವಲ್ಲಿ ಯಶಸ್ವಿಯಾದರು.