ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣ : ಕೃತ್ಯಕ್ಕೆ ಬಳಸಿದ ಬಟ್ಟೆಗಳು ಲಾಂಡ್ರಿಯಿಂದ ವಶ
ಉಡುಪಿ, ಆ.14: ಉದ್ಯಮಿ ಭಾಸ್ಕರ್ ಶೆಟ್ಟಿ ಕೊಲೆ ಪ್ರಕರಣದ ತನಿಖೆ ಮುಂದುವರೆದಿದ್ದು, ಆರೋಪಿಗಳು ಕೃತ್ಯ ನಡೆಸುವಾಗ ಬಳಸಿದ್ದ ಬಟ್ಟೆಗಳನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಭಾಸ್ಕರ್ ಶೆಟ್ಟಿ ಅವರನ್ನು ಕೊಲೆ ಮಾಡುವ ಸಂದರ್ಭ ರಾಜೇಶ್ವರಿ ಶೆಟ್ಟಿ, ನವನೀತ್ ಹಾಗೂ ನಿರಂಜನ್ ಭಟ್ ಧರಿಸಿದ್ದ ರಕ್ತದ ಕಲೆಗಳಿದ್ದ ಬಟ್ಟೆಗಳನ್ನು ನಿಟ್ಟೆಯ ಲಾಂಡ್ರಿಯೊಂದಕ್ಕೆ ನೀಡಿದ್ದರು. ಇದೀಗ ಪೊಲೀಸ್ ಕಸ್ಟಡಿಯಲ್ಲಿ ರುವ ಆರೋಪಿಗಳು ವಿಚಾರಣೆ ವೇಳೆ ನೀಡಿದ ಮಾಹಿತಿಯಂತೆ ಆ ಬಟ್ಟೆ ಗಳನ್ನು ಲಾಂಡ್ರಿಯಿಂದ ವಶಕ್ಕೆ ತೆಗೆದುಕೊಳ್ಳಲಾಗಿದೆ ಎಂದು ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ.ಟಿ.ಬಾಲಕೃಷ್ಣ ತಿಳಿಸಿದ್ದಾರೆ.
ಭಾಸ್ಕರ್ ಶೆಟ್ಟಿ ಅವರ ಮೃತದೇಹವನ್ನು ಸುಟ್ಟು ನಂತರ ಅಸ್ಥಿ ಎಸೆದಿದ್ದಾರೆ ಎಂದು ಹೇಳಲಾದ ಪಳ್ಳಿ ಹಾಗೂ ಸಚ್ಚರಿಪೇಟೆಯ ಹೊಳೆಗಳನ್ನು ಇಂದು ಕೂಡ ಪೊಲೀಸರು ಹುಡುಕಾಟ ಮುಂದುವರೆಸಿದ್ದಾರೆ. ಆದರೆ ಈವರೆಗೆ ಯಾವುದೇ ಕುರುಹುಗಳು ಪತ್ತೆಯಾಗಿಲ್ಲ. ಅದೇ ರೀತಿ ನಿರಂಜನ್ ಭಟ್ ನನ್ನು ಇಂದು ತನಿಖಾಧಿಕಾರಿಯಾಗಿರುವ ಸಮನಾ ನಂದಳಿಕೆಯ ಕೆಲವು ಸ್ಥಳಗಳಿಗೆ ಕೆದೊಯ್ದು, ಮಹಜರು ನಡೆಸಿದ್ದಾರೆ.