ಇಕ್ರಾ ಅರಬಿಕ್ ಶಾಲೆಯಲ್ಲಿ ಸ್ವಾತಂತ್ರ ದಿನಾಚರಣೆ
ಮಂಗಳೂರು, ಆ.15: ಶಿಕ್ಷಣ ಗಳಿಸಿ ಮನುಷ್ಯರು ಮತ್ತೊಬ್ಬರ ಸುಖ-ದುಃಖದಲ್ಲಿ ಪರಸ್ಪರ ಪಾಲ್ಗೊಂಡು ಸೌಹಾರ್ದಯುತವಾಗಿದ್ದರೆ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ವಿ4 ನ್ಯೂಸ್ ಚಾನೆಲ್ನ ನಿರ್ದೇಶಕ ಲಕ್ಷ್ಮಣ ಕುಂದರ್ ಹೇಳಿದರು.
ಅವರು ಇಕ್ರಾ ಅರಬಿಕ್ ಶಾಲೆಯಲ್ಲಿ ನಡೆದ ಸ್ವಾತಂತ್ರೋತ್ಸವ ದಿನಾಚರಣೆಯಲ್ಲಿ ಪಾಲ್ಗೊಂಡು ಮಾತನಾಡಿದರು.
ಈ ಸಂದರ್ಭ ವಿದ್ಯಾರ್ಥಿಗಳಿಂದ ಆಕರ್ಷಕ ಪಥಸಂಚಲನ ನಡೆಯಿತು.ವಿದ್ಯಾರ್ಥಿ ಅರ್ಷಾನ್ ಕಿರಾಅತ್ ಪಠಿಸಿದರು. ಅನ್ಸಾಫ್ ಆಂಗ್ಲ ಭಾಷೆಯಲ್ಲಿ ಹಾಗೂ ಫೌಝಾನ್ ಕನ್ನಡದಲ್ಲಿ ಭಾಷಣಗೈದರು.
ಇಕ್ರಾ ಶಾಲೆಯ ಪ್ರಾಂಶುಪಾಲ ಮೌಲಾನ ಸಾಲಿಮ್ ಖಲೀಫ ನದ್ವಿ, ಶಾಲೆಯ ಅಧ್ಯಾಪಕರು, ಸಿಬ್ಬಂದಿ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಉಪನ್ಯಾಸಕ ನಝೀರ್ ವಂದಿಸಿದರು.
Next Story