ಲಿಯೋ ಫರ್ನಾಂಡಿಸ್, ಡಾ. ಲವೀನಾ ನೊರೊನ್ಹಾ ಸೇರಿ ಐವರು 'ರಚನಾ ಪ್ರಶಸ್ತಿ'ಗೆ ಆಯ್ಕೆ: ಜ.15ರಂದು ಪ್ರಶಸ್ತಿ ಪ್ರದಾನ
ಮಂಗಳೂರು: ಕೆಥೊಲಿಕ್ ಉದ್ಯಮಿಗಳು, ವೃತ್ತಿಪರರು ಹಾಗೂ ಕೃಷಿಕರು ಒಟ್ಟಾಗಿ ಸೇರಿ ಆರಂಭಿಸಿದ ರಚನಾ ಸಂಸ್ಥೆಯ ಕ್ರೈಸ್ತ ಕಥೊಲಿಕ್ ಸಮಾಜದ ಯಶಸ್ವಿ ಉದ್ಯಮಿಗಳು, ವೃತ್ತಿಪರರು, ಕೃಷಿಕರು, ಅನಿವಾಸಿ ಭಾರತೀಯರು ಹಾಗೂ ಸಾಧಕ ಮಹಿಳೆಯರನ್ನು ಗುರುತಿಸಿ ಪ್ರತಿಷ್ಠಿತ ರಚನಾ ಪ್ರಶಸ್ತಿಯನ್ನು ನೀಡುತ್ತಾ ಬಂದಿದೆ.
ಈ ಬಾರಿಯೂ ಸುಮಾರು 25 ಸದಸ್ಯರನ್ನೊಳಗೊಂಡ ಸಮಿತಿಯು ಪರಿಶೀಲನೆ ನಡೆಸಿ ಐದು ಸಾಧಕರನ್ನು ಪ್ರಶಸ್ತಿಗಾಗಿ ಆಯ್ಕೆ ಮಾಡಿದೆ. ರಚನಾ ಕೃಷಿಕ ಪ್ರಶಸ್ತಿ ಗೆ– ಲಿಯೋ ಫರ್ನಾಂಡಿಸ್ ರಚನಾ ಉದ್ಯಮಿ, ಜೆರಿ ವಿನ್ಸೆಂಟ್ ಡಾಯಸ್, ರಚನಾ ವೃತ್ತಿಪರ - ಸಿ, ಡಾ.ಗ್ಲ್ಯಾಡಿಸ್ ಮಿನೇಜಸ್, ರಚನಾ ಅನಿವಾಸಿ ಉದ್ಯಮಿ ---, ಮೈಕಲ್ ಡಿಸೋಜಾ, ರಚನಾ ಮಹಿಳಾ ಸಾಧಕಿ, ಡಾ. ಲವೀನಾ ಎಂ. ನೊರೊನ್ಹಾ ಪ್ರಶಸ್ತಿ ಗೆ ಆಯ್ಕೆಯಾಗಿರುತ್ತಾರೆ.
ಪ್ರಶಸ್ತಿ ಪ್ರದಾನ ಕಾರ್ಯಕ್ರಮವು 2023ರ ಜ.15ರಂದು ರವಿವಾರ ಸಂಜೆ 6 ಗಂಟೆಗೆ ಮಂಗಳೂರಿನ ಮಿಲಾಗ್ರಿಸ್ ಸಭಾಭವನದಲ್ಲಿ ನಡೆಯಲಿದೆ. ಮಂಗಳೂರಿನ ಬಿಷಪ್ ಅತೀ ಡಾ. ಪೀಟರ್ ಪಾಪ್ ಸಾಲ್ದಾನ ಇವರ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಜಯ್ ಡಿಸೋಜ, ಸೀನಿಯರ್ ಎಕ್ಸಿಕ್ಯೂಟಿವ್ ವೈಸ್ ಪ್ರೆಸಿಡೆಂಟ್, ಎಚ್ಎಫ್ಡಿಸಿ ಬ್ಯಾಂಕ್ ಇವರು ಮುಖ್ಯ ಅತಿಥಿಯಾಗಿ ಆಗಮಿಸಲಿದ್ದಾರೆ ಎಂದು ವಿನ್ಸೆಂಟ್ ಕುಟಿನ್ಹಾ ತಿಳಿಸಿದ್ದಾರೆ.
ರಚನಾ ಸಂಸ್ಥೆ ತನ್ನ ಮೂಲ ಆಶಯವಾದ ಕೆಥೊಲಿಕ್ ಯುವಜನರಿಗೆ ಉದ್ಯಮದಲ್ಲಿ ತೊಡಗಿಸಿಕೊಳ್ಳಲು ತರಬೇತಿ, ಬಂಡವಾಳ ಜೋಡಿಸುವಿಕೆ, ತಾಂತ್ರಿಕ ಸಹಕಾರ ನೀಡು ವುದರ ಜೊತೆಗೆ ಸಂಸ್ಥೆಯ ಸದಸ್ಯರಲ್ಲಿ ಸಹಕಾರ ಹಾಗೂ ಸಂಬಂಧವನ್ನು ಬೆಳೆಸುವ ನಿಟ್ಟಿನಲ್ಲಿ ಶ್ರಮಿಸುತ್ತಾ ಬಂದಿದೆ.
ಇದಕ್ಕೆ ಪೂರಕವಾಗಿ ರಚನಾ ಉದ್ಯಮ ತರಬೇತಿ ವಿಭಾಗವನ್ನು ಆರಂಭಿಸಿ ಕಳೆದ ಕೆಲವು ವರ್ಷಗಳಿಂದ ಹಲವು ಯುವ ಜನರಿಗೆ ತರಬೇತಿಯನ್ನು ನೀಡಲಾಗುತ್ತಿದೆ ಎಂದು ವಿನ್ಸೆಂಟ್ ಕುಟಿನ್ಹಾ ತಿಳಿಸಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ರಚನಾ ಕಥೊಲಿಕ್ ಚೇಂಬರ್ ನ ರುಡೋಲ್ಫ್ ರೊಡ್ರಿಗಸ್ (ಸಂಚಾಲಕರು ) ಲವೀನಾ ಮೊಂತೇರೊ ( ಕಾರ್ಯದರ್ಶಿ) ಯುಲಾಲಿಯಾ ಡಿಸೋಜಾ ( ಖಜಾಂಜಿ ) ಲುವಿಸ್ ಜೆ. ಪಿಂಟೊ (ಸಂಘಟಕರು) ಉಪಸ್ಥಿತರಿದ್ದರು.