ಕಾಂಗ್ರೆಸ್ನಿಂದ ರಕ್ತದಾನ ಶಿಬಿರ
ಮಂಗಳೂರು, ಆ.28: ಗುರುಪುರ ಬ್ಲಾಕ್ ಕಾಂಗ್ರೆಸ್, ಯುವ ಕಾಂಗ್ರೆಸ್ ಮತ್ತು ವೆನ್ಲಾಕ್ ಆಸ್ಪತ್ರೆಯ ‘ರಕ್ತನಿಧಿ ಕೇಂದ್ರ’ದ ಸಹಯೋಗದಲ್ಲಿ ರಕ್ತದಾನ ಶಿಬಿರವು ರವಿವಾರ ಗುರುಪುರದ ಕುಕ್ಕದಕಟ್ಟೆ ವೈದ್ಯನಾಥ ಸಮುದಾಯ ಭವನದಲ್ಲಿ ಜರಗಿತು. ಶಿಬಿರವನ್ನು ಜಿಲ್ಲಾ ಉಸ್ತುವಾರಿ ಸಚಿವ ರಮಾನಾಥ ರೈ ಉದ್ಘಾಟಿಸಿದರು. ಪಕ್ಷದ ಮುಖಂಡರಾದ ಬಾಷಾ, ಸಚಿನ್ ಅಡಪ, ಯು.ಪಿ.ಇಬ್ರಾಹೀಂ, ಉದಯ ಭಟ್, ಸೀಮಾ ಮೆಲ್ವಿನ್, ಪದ್ಮನಾಭ ಕೋಟ್ಯಾನ್, ಭಾಸ್ಕರ್ ಅಮೀನ್, ಇಸ್ಮಾಯೀಲ್, ವೆನ್ಲಾಕ್ ಆಸ್ಪತ್ರೆಯ ವೈದ್ಯ ಡಾ.ಶರತ್ ಮತ್ತವರ ತಂಡ, ಉದ್ಯಮಿ ಯತಿರಾಜ್ ಶೆಟ್ಟಿ ಉಪಸ್ಥಿತರಿದ್ದರು. ಈ ಸಂದರ್ಭ ಕ್ರೀಡಾಪಟು ರಕ್ಷಿತ್ ಶೆಟ್ಟಿ, ಕುಪ್ಪೆಪದವಿನ ಝಕಾರಿ ಯಾ ಅವರನ್ನು ಸನ್ಮಾನಿಸಲಾಯಿತು. ಶಿಬಿರದಲ್ಲಿ ನೂರಾರು ಯುವಕರು ರಕ್ತದಾನ ಮಾಡಿದರು. ಗುರುಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್.ಕೆ.ಪೃಥ್ವಿರಾಜ್ ಸ್ವಾಗತಿಸಿದರು. ಗಿರೀಶ್ ವಂದಿಸಿದರು.
Next Story