ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ನಿಂದ ವಿದ್ಯಾರ್ಥಿವೇತನ ಹಾಗೂ ಕುರ್ಆನ್ ವಿತರಣೆ
ಕುಂದಾಪುರ, ಸೆ.26: ನುಸ್ರತುಲ್ ಮಸಾಕೀನ್ ಅಸೋಸಿಯೇಶನ್ ಇದರ ವತಿಯಿಂದ 2016-17ನೆ ಸಾಲಿನ ವಿದ್ಯಾರ್ಥಿವೇತನ ಮತ್ತು ಕುರ್ಆನ್ ವಿತರಣಾ ಸಮಾರಂಭ ಸಂಸ್ಥೆಯ ಹೊಸ ಕಟ್ಟಡದಲ್ಲಿ ನಡೆಯಿತು.
ತಾಲೂಕಿನಾದ್ಯಂತ 60ಕ್ಕೂ ಹೆಚ್ಚು ವಿದ್ಯಾರ್ಥಿಗಳಿಗೆ ಹಾಗೂ 30 ಮದರಸಗಳಿಗೆ ಕುರ್ಆನ್ ಹಾಗೂ ಪಠ್ಯ ಪುಸ್ತಕಗಳಿಗೆ ಆರ್ಥಿಕ ನೆರವು ನೀಡಲಾಯಿತು.ಇದೇ ಸಂದರ್ಭದಲ್ಲಿ ಎಸೆಸೆಲ್ಸಿಯಲ್ಲಿ ಉತ್ತಮ ಶ್ರೇಣಿಯಲ್ಲಿ ತೇರ್ಗಡೆಯಾದ 3 ವಿದ್ಯಾರ್ಥಿಗಳನ್ನು ಸನ್ಮಾನಿಸಲಾಯಿತು.
ಜಿ.ಸರ್ದಾರ್ ಅಧ್ಯಕ್ಷತೆ ವಹಿಸಿದ್ದರು. ಮಂಗಳೂರಿನ ಉದ್ಯಮಿ ಮುಹಮ್ಮದ್ ಶಫಿ,ಕೋಟ ಇಬ್ರಾಹೀಂ ಸಾಹೇಬ್, ಮುಹಮ್ಮದ್ ಗೌಸ್, ಶೇಕ್ ಅಬು ಮುಹಮ್ಮದ್, ಗಲ್ಫ್ ಸದಸ್ಯರಾದ ಮೊಯ್ದಿನ್, ಅಬ್ದುರ್ರಹ್ಮಾನ್, ಸುಲೇಮಾನ್, ಅಬು ಮುಹಮ್ಮದ್ ನಿಝಾಮ್ ಬಾಗ್, ಮುಹಮ್ಮದ್ ಬಶೀರ್ ತೆಕ್ಕಟ್ಟೆ ಉಪಸ್ಥಿತರಿದ್ದರು.
ಅಬ್ದುಲ್ಲಾ ಕೋಡಿ ಸ್ವಾಗತಿಸಿದರು. ಅಬು ಶೇಕ್ ವಂದಿಸಿದರು. ಯುಸೂಫ್ ಕೋಡಿ ಕಾರ್ಯಕ್ರಮ ನಿರೂಪಿಸಿದರು.
Next Story